Advertisement

ಜುಮಲಾಪೂರ ಸುತ್ತಮುತ್ತ ಭಾರಿ ಮಳೆ

10:27 AM Jun 24, 2019 | Team Udayavani |

ದೋಟಿಹಾಳ: ಜುಮಲಾಪೂರ ಗ್ರಾಮದ ಸುತ್ತಮುತ್ತ ರವಿವಾರ ಮಳೆ ಉತ್ತಮವಾಗಿದ್ದು, ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ. ಬೀತನೆ ಮಾಡಿದ ರೈತರು ಈ ಮಳೆ ಸುರಿದ ಕಾರಣ ಹರ್ಷಗೊಂಡಿದ್ದಾರೆ. ಮಳೆಯಿಂದ ಗ್ರಾಮದ ಪಕ್ಕದಲ್ಲಿರುವ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

Advertisement

ಮಳೆಯಿಂದ ಕೆಲವು ಕಡೆಗಳಲ್ಲಿ ಆರ್ಭಟಿಸಿದ್ದು, ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ಜುಮಲಾಪೂರ ಗ್ರಾಮದ ಅಂಬಣ್ಣ ದಂಡಿನ ಎನ್ನುವವರ ಆಕಳು ಹಳ್ಳದಲ್ಲಿ ಕೊಚ್ಚಿಕೊಂಡು ಹೊಗಿ ಮೃತಪಟ್ಟಿದೆ. ಆಕಳನ್ನು ರಕ್ಷಿಸಲು ಗ್ರಾಮದ ಯುವಕರ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ.

ಜುಮಲಾಪೂರ ಗ್ರಾಮದ ಸುತ್ತ ಹಳ್ಳ ಇದೆ. ಗ್ರಾಮದಲ್ಲಿ ಹಳ್ಳಗಳಿಗೆ ಸೂಕ್ತ ಮೇಲ್ಸೆತುವೆ ಹಾಗೂ ಸಾರ್ವಜನಿಕರು ಸುಗಮ ಸಂಚಾರಕ್ಕೆ ರಸ್ತೆಗಳಿಲ್ಲ. ಹೀಗಾಗಿ ಇಲ್ಲಿಯ ಜನರು ಮಳೆಯ ಆರ್ಭಟದಿಂದ ಕೆಲವು ಗಂಟೆಗಳ ಕಾಲ ಜಲ ದಿಗ್ಬಂಧನ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮೇಲ್ಸೆತುವೆ ಹಾಗೂ ಉತ್ತಮ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಹಲವು ಭಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲಿಸಿದ್ದು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದಾಗ ಗ್ರಾಮಕ್ಕೆ ಆಗಮಿಸುವ ಮಹಿಳೆಯರು ಮತ್ತು ವೃದ್ಧರ ಪಾಡು ಹೇಳತೀರದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next