Advertisement

Himachal Pradesh: ಭಾರೀ ಮಳೆ ಮತ್ತು ಭೂಕುಸಿತದಿಂದ ರಸ್ತೆ ಬಂದ್‌; 50 ಮಂದಿಯ ರಕ್ಷಣೆ

12:15 AM Aug 26, 2023 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದ ಸಿಲುಕಿದ್ದ 50ಕ್ಕೂ ಹೆಚ್ಚು ಮಂದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ(ಎನ್‌ಡಿಆರ್‌ಎಫ್) ಸಿಬಂದಿ ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಭಾರೀ ಮಳೆ ಮತ್ತು ಭೂಕುಸಿತದಿಂದ ಮಂಡಿ ಜಿಲ್ಲೆಯಲ್ಲಿ ಹಲವು ರಸ್ತೆಗಳು ಬಂದ್‌ ಆಗಿವೆ. ಇದರಿಂದ ಗ್ರಾಮಸ್ಥರು ಅಪಾಯ ದಲ್ಲಿ ಸಿಲುಕಿದ್ದರು. ಎನ್‌ಡಿಆರ್‌ಎಫ್ ಸಿಬಂದಿ ಸುಮಾರು 15 ಕಿ.ಮೀ. ನಡಿಗೆ ಮೂಲಕ ಪ್ರಯಾ ಣಿಸಿ, 15 ಮಕ್ಕಳು ಸೇರಿದಂತೆ 52 ಮಂದಿ ಗ್ರಾಮಸ್ಥರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ಇತ್ತೀಚಿಗೆ ಸುರಿದ ನಿರಂತರ ಮಳೆಯ ಪರಿಣಾಮ ಬಲಾಡ್‌ ನದಿಯ ಹರಿವು ಹೆಚ್ಚಿದೆ. ಇದರ ಪರಿ ಣಾಮವಾಗಿ ಬಡ್ಡಿ ಕೈಗಾರಿಕಾ ಪ್ರದೇಶ ಹಾಗೂ ಪಿಂಜೌರ್‌ ಸಂಪರ್ಕಿಸುವ ಮಾರನ್ವಾಲಾ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಭಾರೀ ಮಳೆಯ ಕಾರಣ ರಾಜ್ಯದಲ್ಲಿ 709 ರಸ್ತೆಗಳು ಬಂದ್‌ ಆಗಿವೆ. ಜೂ.24ರಿಂದ ಇಲ್ಲಿಯವರೆಗೆ ಮಳೆಗೆ ಸಂಬಂಧಿಸಿದ ಘಟನೆಗಳಿಂದ 242 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next