Advertisement

Heavy Rain ಯಲ್ಲಾಪುರ: ಬಾಗಿನಕಟ್ಟಾ ಬಳಿ ಭೂಕುಸಿತ; ಸಂಚಾರ ಸ್ಥಗಿತ

10:48 PM Jul 04, 2024 | Team Udayavani |

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯ ಬೀಗಾರ ಗ್ರಾಮದಿಂದ ಈ ಹಿಂದೆ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಬಾಗಿನಕಟ್ಟಾ ಬಳಿ ಕುಸಿತವಾದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Advertisement

ಜಿ.ಪಂ ಸಹಾಯಕ ಕಾರಗಯನಿರ್ವಾಹಕ ಅಭಿಯಂತ ಅಶೋಕ್ ಬಂಟ್ ರವರು ಸ್ಥಳಕ್ಕೆ ಬಂದು ಪರಿಶೀಲಿಸಿ ಮಳೆಗಾಲದಲ್ಲಿ ಸಂಚಾರಕ್ಕೆ ಅಪಾಯ ಎಂದು ಸಂಚಾರ ಸ್ಥಗಿತದ ನಿರ್ಣಯ ಕೈಗೊಳ್ಳಲಾಯಿತು.

ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ಕ್ರಮವಾಗಿ ಕುಸಿತದ ಸ್ಥಳದಲ್ಲಿಕೆಂಪು ರಿಬ್ಬನ್ ಕಟ್ಟಿ ಅಪಾಯಕಾರಿ ಸ್ಥಳ ಗುರುತಿಸಿದ್ದಾರೆ.ಅಲ್ಲದೆ ಸದರಿ ರಸ್ತೆಯಲ್ಲಿ ಭಾರಿ ಗಾತ್ರದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧ ಮಾಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಗೆ ಮಾಹಿತಿ ನೀಡಲಾಯಿತು.

ಸಾರ್ವಜನಿಕರಿಗೆ ತಿಳಿಯಪಡಿಸಲು ಗ್ರಾಮ ಪಂಚಾಯತಿಗೆ ಸೂಚಿಸಿದ್ದಾರೆ .ಸಹಾಯಕ ಇಂಜಿನಿಯರ್ ಮೀನಾಕ್ಷಿ ಮಾಸ್ತಿಮನೆ , ಗುತ್ತಿಗೆದಾರ ನವೀನ ಕಿರಗಾರೆ ಸ್ಥಳದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next