Advertisement

ಶಿರಾಡಿಯಲ್ಲಿ ಗುಡ್ಡ ಕುಸಿತ: ಬಸ್‌ಗಳ ಢಿಕ್ಕಿ; ತಪ್ಪಿದ ಭಾರೀ ಅನಾಹುತ 

03:23 PM Aug 14, 2018 | Team Udayavani |

ಸಕಲೇಶಪುರ: ಶಿರಾಡಿ ಘಾಟ್‌ನ ಮಾರನಹಳ್ಳಿ ಬಳಿ ಮಂಗಳವಾರ ಬೆಳಗ್ಗೆ ಭಾರೀ ಮಳೆಯ ಪರಿಣಾಮ ಗುಡ್ಡವೊಂದು ಕಸಿದು ಸರ್ಕಾರಿ ಬಸ್‌ನ ಮೇಲೆ ಬಿದ್ದಿದ್ದು,ಈ ವೇಳೆ ಇನ್ನೊಂದು ಸರ್ಕಾರಿ ಬಸ್‌ ಢಿಕ್ಕಿಯಾಗಿ  ಅವಘಡ ಸಂಭವಿಸಿದೆ. ಬಸ್‌ಗಳು ಸ್ವಲ್ಪ ಮುಂದಕ್ಕೆ ಚಲಿಸಿದರೂ ಪ್ರಪಾತಕ್ಕೆ ಬಿದ್ದು ಭಾರೀ ಅನಾಹುತ ಸಂಭವಿಸುತ್ತಿತ್ತು. 

Advertisement

ಬಸ್‌ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಮರ ಗಿಡಗಳ ಸಮೇತ ಗುಡ್ಡ ಕುಸಿದು  ಬಿದ್ದಿದೆ. ಬಸ್‌ಗೆ ತಾಗಿಕೊಂಡು ಗುಡ್ಡ ಕುಸಿದಿದ್ದು ಈ  ವೇಳೆ ಎದುರುನಿಂದ ಬರುತ್ತಿದ್ದ ಇನ್ನೊಂದು ಬಸ್‌ ಢಿಕ್ಕಿಯಾಗಿದೆ. ಬಸ್‌ಗಳು ಒಂದಕ್ಕೊಂದು ತಾಗಿಕೊಂಡಿದ್ದು ಪ್ರಯಾಣಿಕರಿಗೆ ಗಾಯವಾಗಿಲ್ಲ ಎಂದು ವರದಿಯಾಗಿದೆ. 

ಚಾಲಕರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಹೋಗಿದ್ದು ಸ್ವಲ್ಪ  ಮುಂದಕ್ಕೆ ಚಲಿಸಿದರೂ ಬಸ್‌ಗಳು ಪ್ರಪಾತಕ್ಕೆ ಬೀಳುವ ಸಾಧ್ಯತೆಗಳಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next