Advertisement

Heavy Rain ಸಾಲ್ಬುಡ, ಅರೆಹೊಳೆಯಲ್ಲಿ ಮತ್ತೆ ನೆರೆ; ಡಿಸಿ ಭೇಟಿ

11:42 PM Jul 16, 2024 | Team Udayavani |

ಕುಂದಾಪುರ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಯಾಗುತ್ತಿರುವುದರಿಂದ ಸೌಪರ್ಣಿಕಾ ನದಿ ತಟದ ನಾವುಂದ ಗ್ರಾಮದ ಸಾಲ್ಬುಡ, ಅರೆಹೊಳೆ ಭಾಗದಲ್ಲಿ ಮಂಗಳವಾರ ಮತ್ತೆ ನೆರೆಯಾಗಿದೆ.

Advertisement

ಇಲ್ಲಿ ಕಳೆದ ಜು. 4ರಂದು ಮೊದಲ ಬಾರಿಗೆ ನೆರೆಯಾಗಿತ್ತು. ಸಂಪರ್ಕ ರಸ್ತೆ ಕಡಿತಗೊಂಡಿದ್ದು, ಸಂಚಾರಕ್ಕೆ ಜನ ದೋಣಿಯನ್ನೇ ಆಶ್ರಯಿಸುವಂತಾಗಿದೆ.

ಅರೆಹೊಳೆ ಪ್ರದೇಶದ ನೂರಕ್ಕೂ ಮಿಕ್ಕಿ ಮನೆಗಳ ಸಂಪರ್ಕ ಕಡಿತಗೊಂಡಿದೆ. ಬಾವಿಗಳು ಮುಳುಗಡೆಯಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆ ಯಾಗಿದೆ. ಪಂಚಾಯತ್‌ನಿಂದ ಬಾಟಲಿ ನೀರು ಪೂರೈಸಲಾಗಿದೆ. ಇನ್ನು ಶೌಚಾಲಯಗಳಿಗೂ ನೀರು ನುಗ್ಗಿ, ಸಮಸ್ಯೆಯಾಗಿದೆ.

10 ದಿನಗಳಿಂದ ಗದ್ದೆ ಜಲಾವೃತ
ಇಲ್ಲಿನ ನೂರಾರು ಎಕರೆ ಗದ್ದೆಗಳು ಕಳೆದ 10 ದಿನಗಳಿಂದಲೂ ಮುಳುಗಡೆಯಾಗಿವೆ. ಎರಡೂ ನೆರೆಗಂತೂ ಕೆಲ ದಿನಗಳ ಹಿಂದಷ್ಟೇ ನೆಟ್ಟ ನೇಜಿ ಕೊಳೆತು ಹೋಗುವ ಸಾಧ್ಯತೆ ಇದೆ. ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಡಿಸಿ, ಎಸಿ ಭೇಟಿ
ನೆರೆ ಬಾಧಿತ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭ ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌, ಕುಂದಾಪುರ ಸಹಾಯಕ ಆಯುಕ್ತೆ ರಶ್ಮೀ ಎಸ್‌.ಆರ್‌., ಬೈಂದೂರು ತಹಶೀಲ್ದಾರ್‌ ಪ್ರದೀಪ್‌ ಆರ್‌., ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next