Advertisement

ತ್ರಿಪುರದಲ್ಲಿ ಜಡಿ ಮಳೆ: 3,500 ಕುಟುಂಬಗಳು ನಿರಾಶ್ರಿತ

03:51 PM Jun 13, 2018 | udayavani editorial |

ಅಗರ್ತಲಾ : ತ್ರಿಪುರದಲ್ಲಿ  ಕಳೆದ 24 ತಾಸುಗಳಲ್ಲಿ ಆಗಿರುವ ಜಡಿ ಮಳೆಯಿಂದ 3,500ಕ್ಕೂ ಅಧಿಕ ಕುಟುಂಬಗಳು ಮನೆಮಠ ಕಳೆದುಕೊಂಡಿವೆ. 

Advertisement

ಇಂದು ಬೆಳಗ್ಗೆ ಮಳೆಗೆ ಕೊಂಚ ವಿರಾಮ ಲಭಿಸಿದೆ. ಹಾಗಾಗಿ ನೆರೆಯಲ್ಲಿ ಸಿಲುಕಿಕೊಂಡ 500ಕ್ಕೂ ಅಧಿಕ ಕುಟುಂಬಗಳನ್ನು ಪಾರು ಮಾಡಲು ಸಾಧ್ಯವಾಗಿದೆ. ನೆರೆ ಸಂತ್ರಸ್ತರಿಗಾಗಿ ಆರು ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. 

ಪಶ್ಚಿಮ ತ್ರಿಪುರದ ಸದರ್‌ ಉಪ ವಿಭಾಗದಲ್ಲಿ ವ್ಯಾಪಕ ನಾಶ ನಷ್ಟ ಉಂಟಾಗಿದೆ. ರಾಜಧಾನಿ ನಗರದಲ್ಲಿ ಹರಿಯುತ್ತಿರುವ ಹೌರಾ ನದಿ ಅಪಾಯ ಮಟ್ಟಕ್ಕಿಂತ ಸ್ವಲ್ಪ ಕೆಳಗಿನ ಮಟ್ಟದಲ್ಲಿ ಹರಿಯುತ್ತಿದೆ ಎಂದು ಸದರ್‌ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ತಪನ್‌ ಕುಮಾರ್‌ ದಾಸ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next