Advertisement

Heavy Rain ಮೈದುಂಬಿ ಹರಿಯುತ್ತಿದೆ ತುಂಗಾ ನದಿ; ಐತಿಹಾಸಿಕ ರಾಮ ಮಂಟಪ ಮುಳುಗಡೆ

08:25 PM Jul 30, 2024 | Shreeram Nayak |

ತೀರ್ಥಹಳ್ಳಿ: ತುಂಗಾ ನದಿ ಮೈದುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಪುರಾಣ ಪ್ರಸಿದ್ಧ ಐತಿಹಾಸಿಕ ರಾಮಮಂಟಪ‌ ಮುಳುಗಿದೆ.

Advertisement

ನದಿಯಲ್ಲಿ ನೀರಿನ ಪ್ರಮಾಣ 86 ಅಡಿಗೆ ತಲುಪಿದ್ದು ಕುರುವಳ್ಳಿ ತುಂಗಾ ನದಿ ಪಕ್ಕದಲ್ಲಿ ಇರುವ ತುಂಗಾ ಕಾಲೋನಿ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಾಳಜಿ ಕೇಂದ್ರ (ಗಂಜಿ ಕೇಂದ್ರ) ಕ್ಕೆ ರವಾನಿಸುವಂತೆ ತಾಲೂಕು ಆಡಳಿತ ವತಿಯಿಂದ ತಿಳಿಸಿದೆ.

ಪುತ್ತಿಗೆ ಮಠದ ಎದುರು ಭಾಗದಲ್ಲಿ ನದಿಗೆ ಇಳಿಯುವ ಕೊನೆಯ ಮೆಟ್ಟಿಲಲ್ಲಿ ನೀರು ಹರಿಯುತ್ತಿದೆ. ಹಾಗೂ ಕೊದಂಡರಾಮ ದೇವಾಲಯದ ಎದುರು ಭಾಗದಲ್ಲಿ ಇರುವ ರಸ್ತೆ,ರಾಮೇಶ್ವರ ದೇವಸ್ಥಾನ ಸಮೀಪದ ನಾಗರಕಟ್ಟೆಯ ವರೆಗೆ ಜಲಾವೃತವಾಗಿ ನೀರು ಹರಿಯುತ್ತಿದೆ.ಇನ್ನೂ ಬುಕ್ಲಾಪುರ ಹೊಗುವ ಮಾರ್ಗದಲ್ಲಿ ನದಿಯ ನೀರು ನಿಂತು ರಸ್ತೆ ಪೂರ್ಣ ಬ್ಲಾಕ್ ಆಗಿದೆ.

ಮಳೆಯ ನಡುವೆ ತುಂಗಾ ನದಿಯ ಆರ್ಭಟ, ಮೈ ಜುಮ್ಮೆನ್ನಿಸುವ ಹಾಗೆ ಬೋರ್ಗರೆದು ಹರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next