Advertisement

ಒಂದೆರಡು ದಿನ ಭಾರೀ ಮಳೆ? ; ಪೂರ್ವ ಕರಾವಳಿಯಲ್ಲಿ ಚಂಡಮಾರುತ

12:00 AM Oct 10, 2020 | mahesh |

ಹೊಸದಿಲ್ಲಿ: ರವಿವಾರ ಮತ್ತು ಸೋಮವಾರ ಕರ್ನಾಟಕದ ಒಳನಾಡು, ತೆಲಂಗಾಣ ಮತ್ತು ಪೂರ್ವ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾ ಮಾನ ಇಲಾಖೆ ಎಚ್ಚರಿಸಿದೆ.  ಉತ್ತರ ಅಂಡಮಾನ್‌ ಸಮುದ್ರ, ಸನಿಹದ ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದು, ಅ. 10ರಂದು ಇದು ಚಂಡಮಾರುತವಾಗಿ ಪರಿ ವರ್ತನೆಯಾಗುವ ಸಾಧ್ಯತೆ ಯಿದೆ. ಇದು ಮತ್ತಷ್ಟು ಬಲಗೊಂಡು ಪೂರ್ವ ಕರಾವಳಿಗೆ ಅಪ್ಪಳಿಸಲಿದೆ ಎಂದು ಇಲಾಖೆ ತಿಳಿಸಿದೆ.

Advertisement

ಕರುನಾಡಿನಲ್ಲಿ ಮಳೆ
ಕರ್ನಾಟಕದ ಒಳ ನಾಡು, ಒಡಿಶಾ, ಆಂಧ್ರ ಕರಾವಳಿ, ತೆಲಂಗಾಣ, ರಾಯಲ ಸೀಮಾ, ಮರಾಠವಾಡಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಯಿದೆ. ಅಂಡ ಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಶುಕ್ರವಾರದಿಂದಲೇ ಧಾರಾ ಕಾರ ಮಳೆ ಸುರಿಯುತ್ತಿದೆ. ಕರಾವಳಿಯಲ್ಲೂ ಮೋಡ ಕವಿದ ವಾತಾವರಣ ಮತ್ತು ಕೆಲವೆಡೆ ಉತ್ತಮ ಮಳೆ ಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next