Advertisement

ದಿಲ್ಲಿಯಲ್ಲಿ ಜಡಿಮಳೆ, ರಸ್ತೆ ತುಂಬ ನೀರು,ಅನೇಕ ಕಡೆ ಟ್ರಾಫಿಕ್‌ ಜಾಮ್‌

11:26 AM Sep 01, 2018 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿಂದು ಇಂದು ಶನಿವಾರ ಬೆಳಗ್ಗೆ ಬಿರುಸಿನ ಮಳೆ ಸುರಿದಿದೆ. ನಿನ್ನೆ ದಿನಪೂರ್ತಿ ಬಿಸಿಲ ಬೇಗೆಯನ್ನು ಅನುಭವಿಸಿದ್ದ ದಿಲ್ಲಿಗರಿಗೆ ಇಂದಿನ ಮಳೆ ತಂಪೆರೆಯಿತು. 

Advertisement

ದಿಲ್ಲಿಯ ಮೋತಿ ಬಾಗ್‌, ಆರ್‌ ಕೆ ಪುರಂ ಮತ್ತು ಲಕ್ಷ್ಮೀ ನಗರ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಇಂದು  ಬೆಳಗ್ಗೆ ಬಹುತೇಕ ಜಡಿಮಳೆ ಉಂಟಾಯಿತು. ಪರಿಣಾಮವಾಗಿ ರಸ್ತೆಗಳಲ್ಲಿ ಮೊಣಕಾಲ ಮಟ್ಟಕ್ಕೆ ನೀರು ತುಂಬಿಕೊಂಡಿತು. ಜನ ಹಾಗೂ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ನಗರದ ಹಲವು ಕಡೆಗಳಲ್ಲಿ ಟ್ರಾಫಿಕ್‌ ಜಾಮ ಉಂಟಾಯಿತು. ಇದನ್ನು ಅನುಸರಿಸಿ ದಿಲ್ಲಿಯ ಟ್ರಾಫಿಕ್‌ ಪೋಲೀಸರು ಜನರಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದರು. 

ಲಜಪತ್‌ನಗರ ಮಾರ್ಕೆಟ್‌, ಪಂತ್‌ ನಗರ ಬಸ್‌ ನಿಲ್ದಾಣ, ಲಜಪತ್‌ ರಾಯ್‌ ರಸ್ತೆಗಳು ನೀರಿನಿಂದ ತುಂಬಿಕೊಂಡಿರುವ ಈ ಮಾರ್ಗವನ್ನು ತಪ್ಪಿಸಿಕೊಳ್ಳುವಂತೆ ಪೊಲೀಸರು ಮೋಟಾರು ವಾಹನಗಳಿಗೆ ಸೂಚಿಸಿದರು. 

ದಿಲ್ಲಿಯಲ್ಲಿ ಗುರುವಾರ 28 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಇತ್ತು. ಅಂತೆಯೇ ನಗರದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಹೇಳಿತ್ತು. ಆದರೆ ಇಂದು ಶನಿವಾರ ದಿಲ್ಲಿಗರು ಜಡಿಮಳೆಯನ್ನೇ ಕಂಡರು. 

Advertisement

Udayavani is now on Telegram. Click here to join our channel and stay updated with the latest news.

Next