Advertisement

ಕಂದನ ಉಸಿರು ನಿಲ್ಲಿಸಿದ ಬಿರುಗಾಳಿ : ಮೇಲ್ಛಾವಣಿ ಹಾರಿ ಮಗು ಸಾವು

10:09 AM Apr 28, 2021 | Suhan S |

ವಿಜಯಪುರ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಜೋರಾಗಿದೆ. ಬಿರುಗಾಳಿಗೆ ಮಗುವಿದ್ದ ಜೋಳಿಗೆ ಸಮೇತ ಮೇಲ್ಛಾವಣಿ ಹಾರಿ ಹೋಗಿ, ಹಸುಳೆ ಬಲಿಯಾದ ದುರ್ಘಟನೆ ವರದಿಯಾಗಿದೆ.

Advertisement

ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದ ಅಬ್ದುಲ್ ರೆಹಮಾನ ಕಸಬ್ ಎಂಬವರ 5  ತಿಂಗಳ ಮಗು ಮುಸ್ಕಾನ್ ಮೃತ ದುರ್ದೈವಿ. ಮಗುವನ್ನು ಮನೆಯ ಮೇಲ್ಛಾವಣಿ ಕಂಬಿಗೆ ಕಟ್ಟಿದ್ದ ಜೋಳಿಗೆಯಲ್ಲಿ ಮಲಗಿಸಲಾಗಿತ್ತು.

ಇದನ್ನೂ ಓದಿ : ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೋವಿಡ್ ಗೆ ಬಲಿ

ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಅಬ್ದುಲ್ ರೆಹಮಾನ್ ಕಸಾಬ ಹಾಗೂ ತಬಸುಮ್ ದಂಪತಿ ವಾಸವಿದ್ದ ಮನೆಯ ತಗಡಿನ ಹೊದಿಕೆಯ ಸೆಡ್ ಮೇಲ್ಛಾವಣಿ ಹಾರಿ ಹೋಗಿದೆ. ಈ ಸಂದರ್ಭದಲ್ಲಿ ಮೇಲ್ಛಾವಣಿ ಕಂಬಿಗೆ ಕಟ್ಟಿದ್ದ ಜೋಳಿಗೆಯಲ್ಲಿದ್ದ ಮಗು ಸಮೇತ ಸುಮಾರು‌ 50 ಅಡಿ ದೂರದಲ್ಲಿದ್ದ ವಿದ್ಯುತ್ ಕಂಬಕ ಬಡಿದು, ಶಾಟ್ ಸರ್ಕ್ಯೂ ಆಗಿ ಮೃತಪಟ್ಟಿದೆ.

ಮಗುವನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next