Advertisement

ವಿಜಯಪುರ: ಮಳೆಯ ಅಬ್ಬರಕ್ಕೆ ಮನೆಯ ಮೇಲ್ಚಾವಣಿ ಕುಸಿದು ವೃದ್ಧೆ ಮೃತ್ಯು

10:35 AM Jul 25, 2023 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಅಧಿಕ‌ ಮಳೆ ಸುರಿದಿದ್ದು, ಓರ್ವ ವೃದ್ಧೆ ಹಾಗೂ ನಾಲ್ಕು ಜಾನುವಾರುಗಳು ಜೀವ ಹಾನಿಯಾಗಿದೆ.

Advertisement

ವಿಜಯಪುರ ತಾಲೂಕಿನ ಕನ್ನೂರ ಗ್ರಾಮದ ಶಿವಮ್ಮ ನೂರುಂದಪ್ಪ ಸಾವಳಗಿ (60) ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟಿದ್ದಾರೆ.

ಸೋಮವಾರ ರಾತ್ರಿ ಸುರಿದ ಮಳೆಯಿಂದ ಮಂಗಳವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಮನೆಯ ಮೇಲ್ಚಾವಣಿ ಕುಸಿದು ಸಾವನ್ನಪ್ಪಿರುತ್ತಾರೆ.

ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು ಭೇಟಿ ನೀಡಿರುತ್ತಾರೆ . ಮರಣೋತ್ತರ ಪರೀಕ್ಷೆ ಬಳಿಕ ಮೃತಳ ವಾರಸುದಾರರಿಗೆ ನಿಯಮಾನುಸಾರ ಪರಿಹಾರ ವಿತರಿಸುವುದಾಗಿ ಜಿಲ್ಲಾಧಿಕಾರಿ ಭೂಬಾಲನ್ ತಿಳಿಸಿದ್ದಾರೆ.

ಇದಲ್ಲದೇ ಇಂಡಿ ಹಾಗೂ ಸಿಂದಗಿ ತಾಲೂಕಿನಲ್ಲಿ ತಲಾ ಎರಡು ಜಾನುವಾರುಗಳು ಮಳೆಯ ಅಬ್ಬರಕ್ಕೆ ಜೀವ ಕಳೆದುಕೊಂಡಿವೆ.

Advertisement

ಸಿಂದಗಿ ತಾಲೂಕಿನಲ್ಲಿ 8, ಆಲಮೇಲ ತಾಲೂಕಿನಲ್ಲಿ 7, ಇಂಡಿ ತಾಲೂಕಿನಲ್ಲಿ 4 ಹಾಗೂ ಬಬಲೇಶ್ವರ ತಾಲೂಕಿನಲ್ಲಿ 1 ಮನೆ ಸೇರಿದಂತೆ ಒಟ್ಟು 20 ಮನೆಗಳು ಮಳೆಯ ಹೊಡೆತಕ್ಕೆ ನೆಲಕಚ್ಚಿವೆ.

ಲಭ್ಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸೋಮವಾರ ದಿಂದ ಮಂಗಳವಾರದ ವರೆಗೆ 42.8 ಮಿ.ಮೀ. ಮಳೆಯಾಗಿದೆ.

ಇದನ್ನೂ ಓದಿ: ಲೋಕಾಯುಕ್ತ ಪೊಲೀಸರು​ ದಾಳಿ ಮಾಡುತ್ತಿದ್ದಂತೆ ಲಂಚದ ಹಣವನ್ನೇ ನುಂಗಿದ ಕಂದಾಯ ಅಧಿಕಾರಿ!

Advertisement

Udayavani is now on Telegram. Click here to join our channel and stay updated with the latest news.

Next