Advertisement

ಮೂಳೂರಿನಲ್ಲಿ ಕಡಲ್ಕೊರೆತ ತೀವ್ರ: ತುರ್ತು ಕಾಮಗಾರಿ

01:46 AM Jul 07, 2022 | Team Udayavani |

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕಳೆದ ಎರಡು ದಿನಗಳಲ್ಲಿ ಮತ್ತೆ ನಾಲ್ಕು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.

Advertisement

ಮೂಳೂರು ತೊಟ್ಟಂ ವಾರ್ಡ್‌ನ ಬಾಬು ಶೆಟ್ಟಿ, ಸುನಂದಾ ಪೂಜಾರ್ತಿ ಅವರ ಜಾಗ ಮತ್ತು ಖಾಸಗಿ ಗೆಸ್ಟ್‌ ಹೌಸ್‌ ಪರಿಸರದಲ್ಲಿ ಆಗುತ್ತಿದ್ದ ಕಡಲ್ಕೊರೆತ ಸಮಸ್ಯೆ ದಿನೇಶ್‌ ಪೂಜಾರಿ, ಪದ್ಮಾವತಿ, ಡೇಲಿಯಾ, ಮಹಾಲಿಂಗ ಅಂಚನ್‌ ಅವರ ಜಾಗಕ್ಕೂ ವಿಸ್ತರಿಸಿದೆ. ಸ್ಥಳೀಯರಾದ ಪದ್ಮಾವತಿ, ದಿನೇಶ್‌ ಪೂಜಾರಿ ಅವರಿಗೆ ಸೇರಿದ ನಾಲ್ಕೈದು ತೆಂಗಿನ ಮರಗಳು ಉರುಳುವ ಭೀತಿ ಎದುರಾಗಿದೆ.

ಈ ಹಿಂದೆ ಹಾಕಲಾಗಿದ್ದ ತಡೆಗೋಡೆ ಯನ್ನು ಕೊರೆದುಕೊಂಡು ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಅಪಾರ ಪ್ರಮಾಣದ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ.

ಕಾಮಗಾರಿ ಆರಂಭ
ಶಾಸಕ ಲಾಲಾಜಿ ಆರ್‌. ಮೆಂಡನ್‌ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಅವರು ಅಧಿಕಾರಿಗಳ ಜತೆಗೂಡಿ ಮಂಗಳವಾರ ಮೂಳೂರು ತೊಟ್ಟಂನ ಕಡಲ್ಕೊರೆತದ ಪ್ರದೇಶಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದರು. ಈ ವೇಳೆ ನೀಡಿದ್ದ ಭರವಸೆಯಂತೆ ತುರ್ತಾಗಿ ತಾತ್ಕಾಲಿಕ ತಡೆಗೋಡೆ ರಚನೆ ಕಾಮಗಾರಿಗೆ ಬುಧವಾರ ಚಾಲನೆ ದೊರಕಿದ್ದು ಈಗಾಗಲೇ ಟಿಪ್ಪರ್‌ಗಳಲ್ಲಿ ಕಲ್ಲುಗಳು ಸ್ಥಳಕ್ಕೆ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next