Advertisement

ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆ:ಸಿಡಿಲಿಗೆ ಓರ್ವ ಬಲಿ 

03:14 PM Feb 07, 2019 | Team Udayavani |

ಮಂಗಳೂರು: ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಗುರುವಾರ ಸಂಜೆ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಯುವಕ ಮೃತ ಪಟ್ಟಿದ್ದಾನೆ. 

Advertisement

ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹಕ್ಕೆ ಸಿಡಿಲು ಬಡಿದ ಪರಿಣಾಮ  ಕಾರ್ಮಿಕ ಪ್ರವೀಣ್(20) ಎನ್ನುವ ಯುವಕ  ಸಾವನ್ನಪ್ಪಿದ್ದಾನೆ.ಪ್ರವೀಣ್‌ ಹರಿಹರ ಪಳ್ಳತ್ತಡ್ಕ ನಿವಾಸಿ ಎಂದು ತಿಳಿದು ಬಂದಿದೆ.

ದಿಢೀರ್‌  ಸುರಿದ ಮಳೆಗೆ ಕೆಎಸ್ಎಸ್ ಕಾಲೇಜಿನಲ್ಲಿ ನಡೆಯುತ್ತಿದ್ದ  ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟಕ್ಕೆ  ಅಡಚಣೆ ಉಂಟಾಯಿತು.

ಪಂದ್ಯಾಟ ನಡೆಯುವ ಅಂಗಣದ ಸುತ್ತ ಹಾಕಲಾಗಿದ್ದ ಶಾಮಿಯಾನ.ವೇದಿಕೆಗಳು ಗಾಳಿಗೆ ಹಾರಿ ಹೋಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next