Advertisement

ಸಿದ್ದಾಪುರದಲ್ಲಿ ಮಳೆ ಅಬ್ಬರ ಜೋರು

01:31 PM Aug 04, 2020 | Suhan S |

ಸಿದ್ದಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆ ರಭಸದಿಂದ ಬೀಳತೊಡಗಿದ್ದು, ಸೋಮವಾರ ಮತ್ತಷ್ಟು ಬಿರುಸಾಗಿ ಸುರಿಯತೊಡಗಿದೆ.

Advertisement

ಏಕಾಏಕಿ ಅಬ್ಬರದ ಮಳೆ ಬೀಳತೊಡಗಿದ ಕಾರಣ ಹಳ್ಳ, ಹೊಳೆಗಳಲ್ಲಿ ನೀರಿನ ಹರುವು ಹೆಚ್ಚಿದೆ. ಇದೇ ರೀತಿ ಮಳೆ ಬೀಳುವ ಪ್ರಮಾಣ ಹೆಚ್ಚಿದಲ್ಲಿ ತಾಲೂಕಿನ ಪ್ರಮುಖ ಹೊಳೆಗಳಿಗೆ ಪ್ರವಾಹ ಬರುವ ಸಾಧ್ಯತೆ ಇದೆ. ಸೋಮವಾರ ಬೆಳಗ್ಗೆ 8ಕ್ಕೆ ಕೊನೆಗೊಂಡಂತೆ ಮುಂಚಿನ 24 ಗಂಟೆಗಳಲ್ಲಿ 39.6 ಮಿಮೀ.ಮಳೆಯಾಗಿದ್ದು, ಈವರೆಗೆ 1237 ಮಿಮೀ ಮಳೆಯಾದ ವರದಿಯಾಗಿದೆ. ಮಳೆಯಿಂದ ಸೋಮವಾರ ಸಂಜೆಯ ವೇಳೆಗೆ ಯಾವುದೇ ಹಾನಿಯ ಪ್ರಕರಣ ವರದಿಯಾಗಿಲ್ಲ ಎಂದು ತಹಶೀಲ್ದಾರ್‌ ಕಚೇರಿ ಮಾಹಿತಿ ದೊರಕಿದೆ.

ಕಳೆದ ವಾರ ಮಳೆ ಕಡಿಮೆಯಾದ ಕಾರಣ ಭತ್ತದ ನಾಟಿ ಕೆಲಸಕ್ಕೆ ಕೆಲವೆಡೆ ಸ್ವಲ್ಪಮಟ್ಟಿಗೆ ನೀರಿನ ಕೊರತೆ ಉಂಟಾಗಿತ್ತು. ತಾಲೂಕಿನಲ್ಲಿ ಒಟ್ಟೂ 5965 ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶವಿದ್ದು, ಅದರಲ್ಲಿ ಸುಮಾರು 1,700ಕ್ಕೂ ಹೆಚ್ಚು ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ. ಮಳೆಯ ಪ್ರಮಾಣ ಹೆಚ್ಚುತ್ತಿರುವ ಕಾರಣ ಇನ್ನುಳಿದ ಪ್ರದೇಶಗಳಲ್ಲೂ ನಾಟಿ ಕಾರ್ಯಕ್ಕೆ ಅನುಕೂಲವಾಗಲಿದೆ.

ಕುಮಟಾದಲ್ಲಿ 52.3 ಮಿಮೀ ಮಳೆ :  ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವ ಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಯತ್ತಮ ಮಳೆಯಾಗಿದೆ. ಅಂಕೋಲಾದಲ್ಲಿ 49.5 ಮಿ.ಮೀ, ಭಟ್ಕಳ 51.0 ಮಿ.ಮೀ, ಹಳಿಯಾಳ 5.4 ಮಿ.ಮೀ, ಹೊನ್ನಾವರ 46.8 ಮಿ.ಮೀ, ಕಾರವಾರ 29.1 ಮಿ.ಮಿ, ಕುಮಟಾ 52.3 ಮಿ.ಮೀ, ಮುಂಡಗೋಡ 6.6 ಮಿ.ಮೀ, ಸಿದ್ದಾಪುರ 39.6 ಮಿ.ಮೀ, ಶಿರಸಿ 45.0 ಮಿ.ಮೀ, ಜೋಯಿಡಾ 9.0 ಮಿ.ಮೀ, ಯಲ್ಲಾಪುರ 19.4 ಮಿ.ಮೀ. ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next