Advertisement

ಉತ್ತರದಲ್ಲಿ ಭಾರೀ ಮಳೆ, ಹಾನಿ : ಅಪಾಯ ಮಟ್ಟ ಮೀರಿದ ಗಂಗಾ, ಭಾಗೀರಥಿ

02:19 AM Jun 20, 2021 | Team Udayavani |

ಡೆಹ್ರಾಡೂನ್‌: ಉತ್ತರಾಖಂಡ್‌ನ‌ ಚಮೋಲಿ ಕಣಿವೆ ಹಾಗೂ ಇನ್ನಿತರ ಕಡೆಗಳಲ್ಲಿ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆ ರಾಜ್ಯದ ಪ್ರಮುಖ ನದಿಗಳಾದ ಗಂಗಾ ಹಾಗೂ ಭಾಗೀರಥಿ ನದಿಗಳು ಶನಿವಾರ ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಹಾಗಾಗಿ, ನದಿ ಪಾತ್ರದಲ್ಲಿ ಬರುವ ಎಲ್ಲ ಗ್ರಾಮ, ಊರು ಹಾಗೂ ಇನ್ನಿತರ ಜನವಸತಿ ಪ್ರದೇಶಗಳಿಂದ ಜನರನ್ನು ತೆರವು ಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗಂಗಾ ನದಿಯು ಹರಿದ್ವಾರ ಹಾಗೂ ರಿಷಿಕೇಶ್‌ನಲ್ಲಿ, ಭಾಗೀರಥಿ ನದಿ ತೇಹ್ರಿ ಜಿಲ್ಲೆಯ ದೇವಪ್ರಯಾಗ್‌ನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

Advertisement

ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಶನಿವಾರ, ಗುಡುಗು ಸಹಿತ ಭಾರೀ ಮಳೆಯಾಗಿದೆ. ಕಾನ್ಪುರ, ಮೊರಾದಾಬಾದ್‌, ಫ‌ೂಲ್ಪುರ್‌, ಮವು ತಾಲೂಕು, ತೀರ್ವಾ, ಕರ್ಚಾನಾ, ಧೌರಾಹರ, ರಾಜಘಾಟ್‌, ಕಾಂತ್‌ ಪ್ರಾಂತ್ಯಗಳಲ್ಲಿ ಭಾರೀ ಮಳೆ ಬಿದ್ದಿದೆ. ಮುಂಗಾರು ಮಾರುತಗಳು ಆ ರಾಜ್ಯದ ಪಶ್ಚಿಮದ ಕಡೆಗೂ ಸಾಗಿದ್ದು, ಆ ಭಾಗದಲ್ಲೂ ಹಲವಾರು ಕಡೆ ಮಳೆಯಾಗಿದೆ. ಜೂ. 20ರಂದು ಧಾರಾಕಾರವಾಗಿ ಬೀಳಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.

ಗುಜರಾತ್‌ನಲ್ಲಿ: ನೈಋತ್ಯ ಮುಂಗಾರು ಮಾರುತಗಳ ಪ್ರಭಾವದಿಂದಾಗಿ ಗುಜರಾತ್‌ನ ಹಲವಾರು ಪ್ರಾಂತ್ಯಗಳಲ್ಲಿ ಶನಿವಾರದಂದು ತೀವ್ರ ಮಳೆಯಾಗಿದೆ. ಶುಕ್ರವಾರವೂ ಅಲ್ಲಿ ಭಾರೀ ಮಳೆ ಸುರಿದಿತ್ತು. ಗುಜರಾತ್‌ನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮುಂಗಾರು ಮಾರುತಗಳು ಕಾಲಿಟ್ಟಿದ್ದು, ಎಲ್ಲ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next