Advertisement

ಚತುಷ್ಪಥ ಅವಾಂತರ: ಪಡುಬಿದ್ರಿ ಪೇಟೆ ಜಲಾವೃತ

11:49 AM May 30, 2018 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥದ ಅರೆಬರೆ ಕಾಮಗಾರಿಯಿಂದಾಗಿ ಮಳೆ ನೀರು ಹರಿದುಹೋಗಲು ಸಾಧ್ಯವಾಗದೇ ಪಡುಬಿದ್ರಿ ಪೇಟೆ ಜಲಾವೃತವಾಯಿತು. ಕಾರ್ಕಳ ರಸ್ತೆಯ ಕೆಲವು ವ್ಯವಹಾರ ಮಳಿಗೆಗಳಿಗೆ ನೀರು ನುಗ್ಗಿತು.

Advertisement

 ಪಡುಬಿದ್ರಿ ಪೇಟೆ ಸಹಿತ ಇಕ್ಕೆಲಗಳ ಸುಮಾರು 3 ಕಿ.ಮೀ. ವ್ಯಾಪ್ತಿಯ ಹೆದ್ದಾರಿ ಸಮೀಪದ ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.

ಎರ್ಮಾಳು, ಉಚ್ಚಿಲ, ಪಲಿಮಾರು, ಹೆಜಮಾಡಿ ಗಳಲ್ಲೂ ತಗ್ಗು ಪ್ರದೇಶಗಳಲ್ಲಿ ನೆರೆನೀರು ನಿಂತಿದೆ. ಪಡುಹಿತ್ಲು ಸೇಸಿ ಪಂಬದ ಅವರ ಮನೆಯೊಳಕ್ಕೆ ನೀರು ಸೇರಿದ್ದು ಅವರನ್ನು ಸಂಬಂಧಿಕರ ಮನೆಗೆ ವರ್ಗಾಯಿಸಲಾಗಿದೆ. ನಡಿಪಟ್ಣದ ಮುಟ್ಟಳಿವೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಈ ನೆರೆ ಹಾವಳಿಗೆ ಕಾರಣ ಎನ್ನಲಾಗಿದೆ. ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಪಡುಬಿದ್ರಿ ಗ್ರಾಮ ಲೆಕ್ಕಿಗ ಶ್ಯಾಮ್‌ಸುಂದರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next