Advertisement

ಚಿಕ್ಕಮಗಳೂರು : ಭಾರೀ ಮಳೆಗೆ ಕುಸಿದ ಮನೆ : ಪ್ರಾಣಾಪಾಯದಿಂದ ಅಜ್ಜಿ ಪಾರು

05:40 PM Jun 18, 2021 | Team Udayavani |

ಚಿಕ್ಕಮಗಳೂರು : ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಇದೇ ಹಿನ್ನೆಯಲ್ಲಿ ಭಾರೀ ಮಳೆಗೆ ವೃದ್ಧೆಯ ಮನೆಯೊಂದು ಕುಸಿದು ಅದೃಷ್ಟವೆಂಬಂತೆ ಮನೆಯಲ್ಲಿದ್ದ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು, ಘಟನೆ ಸಂಭವಿಸಿದೆ. ನಿಂಗಮ್ಮ ಎಂಬುವರ ಮನೆ ಸಂಪೂರ್ಣ ಕುಸಿದಿದೆ.

ಮಳೆ ಬರುವ ವೇಳೆ ಅಜ್ಜಿ ನಿಂಗಮ್ಮ ಮನೆಯಲ್ಲಿ ಒಬ್ಬರೆ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮಳೆ ಜೋರಾಗಿ ಮನೆ ಕುಸಿಯುವಂತಾದಾಗ ಒಳಗಡೆ ಇದ್ದ ನಿಂಗಮ್ಮ ಮನೆಯಿಂದ ಹೊರಗಡೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next