Advertisement

ಬಂಟ್ವಾಳ: ಭಾರೀ ಮಳೆ; ಮನೆಗಳಿಗೆ ನುಗ್ಗಿದ ನೀರು

02:15 AM Jun 28, 2018 | Karthik A |

ಬಂಟ್ವಾಳ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನೀರು ಹರಿಯಲು ಜಾಗವಿಲ್ಲದೆ ಅಮಾrಡಿ, ಬಿ. ಮೂಡ, ಭಂಡಾರಿಬೆಟ್ಟು ಸಹಿತ ಇತರ ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿದೆ. ತಗ್ಗು ಪ್ರದೇಶ ಜಲಾವೃತವಾಗಿದ್ದು, ಜನ ಸಂಚಾರಕ್ಕೆ ಅಡ್ಡಿಯಾಗಿದೆ. ಅಮಾrಡಿ ವಸತಿ ಸಮುಚ್ಚಯ ಪ್ರದೇಶದಲ್ಲಿ ನೆರೆಯಂತೆ ಮಳೆ ನೀರು ಸಂಗ್ರಹವಾಗಿತ್ತು.ಕೆಲವೊಂದು ವಸತಿ ಸಮುಚ್ಚಯದ ಪ್ರದೇಶದಲ್ಲಿ ಜೆಸಿಬಿ ಬಳಸಿ ಚರಂಡಿ ದುರಸ್ತಿ ಮಾಡಿದ್ದು, ನೀರು ಹರಿದು ಹೋಗುವಂತೆ ಮಾಡಲಾಗುತ್ತಿದೆ.

Advertisement

ತಹಶೀಲ್ದಾರ್‌ ಸಂತೋಷ್‌ ಜಿ., ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ನವೀನ್‌ ಬೆಂಜನಪದವು,  ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಸದಸ್ಯರಾದ ಜಗದೀಶ ಕುಂದರ್‌, ಬಿ. ದೇವದಾಸ ಶೆಟ್ಟಿ, ಗಂಗಾಧರ್‌, ಪುರಸಭಾ ಎಂಜಿನಿಯರ್‌ ಡೊಮೆನಿಕ್‌ ಡಿಮೆಲ್ಲೊ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೇಕಾರ್‌, ಸಿಬಂದಿ ಸದಾಶಿವ, ಶಿವಪ್ರಸಾದ್‌ ಸ್ಥಳದಲ್ಲಿದ್ದು, ಮುನ್ನೆಚ್ಚರಿಕೆ ವಹಿಸಿದ್ದಾರೆ. ಅಗ್ನಿಶಾಮಕ ದಳವನ್ನು ಸನ್ನದ್ಧವಾಗಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next