Advertisement
ನೆಲ ಮಂಗಲದಲ್ಲಿ ಅಮಾನಿ ಕೆರೆಯ ಕೊಡಿ ಒಡೆದಿದ್ದು,ಸುಮಾರು 400 ಮನೆಗಳಿಗೆ ನೀರು ನುಗ್ಗಿದೆ. ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೆಡೆ ಮನೆಗಳ ಗೋಡೆಗಳು ಕುಸಿದು ಬೀಳುತ್ತಿವೆ.
Related Articles
Advertisement
ಬೀದರ್ನಲ್ಲೂ ತಡರಾತ್ರಿ ಭಾರೀ ಮಳೆ ಸುರಿದಿದ್ದು,ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ.
ಚಾಮರಾಜನಗರದಲ್ಲಿ ಯುವಕನ ರಕ್ಷಣೆ ಚಾಮರಾಜನಗರದಲ್ಲೂ ವರುಣ ಅಬ್ಬರಿಸಿದ್ದು, ಕೊಳ್ಳೇಗಾಲದ ಲೊಕ್ಕನಹಳ್ಳಿಯ ಉಡುತೊರೆ ಹಳ್ಳದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸ್ಥಳೀಯ ಯುವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಕೊಳ್ಳೇಗಾಲ-ಸತ್ತಿಮಂಗಲ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತಿದ್ದು ಸಂಚಾರಕ್ಕೆ ಪರದಾಡಬೇಕಾಗಿದೆ. ಹಲವೆಡೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೋಲಾರದಲ್ಲೂ ಮಳೆ; ಶಾಲಾ ಮಕ್ಕಳ ರಕ್ಷಣೆ
ಕೋಲಾರದಲ್ಲೂ ಭಾರಿ ಮಳೆ ಸುರಿದಿದ್ದು, ಕೆರೆಯ ಕೋಡಿ ಒಡೆದ ಪರಿಣಾಮ ವಡಗೂರು ಗ್ರಾಮದ ಕೋರ್ ಇನ್ ಶಾಲೆಗೆ ನೀರು ನುಗ್ಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ವಿಪತ್ತು ನಿರ್ವಹಣಾ ದಳದ ಸಿಬಂದಿಗಳು ಬೋಟ್ ಬಳಸಿ 150 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ.