Advertisement

ಕೃಷ್ಣಾ , ಭೀಮಾ ನಡುಗಡ್ಡೆಗೆ ನುಗ್ಗಿದ ನೀರು, ಸಂಕಷ್ಟದಲ್ಲಿ ಕುಟುಂಬಗಳು

12:00 PM Aug 11, 2019 | keerthan |

ರಾಯಚೂರು: ಕೃಷ್ಣಾ ಮತ್ತು ಭೀಮಾ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ನಡುಗಡ್ಡೆಗಳಿಗೆ ಪ್ರವಾಹ ಭೀತಿ ಎದುರಾಗಿದ್ದು ನೂರಾರು ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ .

Advertisement

ತಾಲೂಕಿನ ಕುರ್ವಕುಲಾ ನಡುಗಡ್ಡೆಯವರೆಗೂ ನದಿ ನೀರು ತಲುಪಿದ್ದು, ಇಲ್ಲಿ 140 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇಲ್ಲಿ 650 ಕ್ಕೂ ಅಧಿಕ ಜನರಿರುವ ಮಾಹಿತಿಯಿದೆ.

ನಾರಾಯಾಣಪುರ ಜಲಾಶಯದಿಂದ 6.18 ಲಕ್ಷ ಕ್ಯೂಸೆಕ್ ಹಾಗೂ ಸನ್ನತಿ ಜಲಾಶಯದಿಂದ ಭೀಮಾ ನದಿಗೆ 2.85 ಲಕ್ಷ ಕ್ಯೂಸೆಕ್ ನೀರು ಹರಿದು ಬಿಡುತ್ತಿರುವುದರಿಂದ ಅಪಾಯದ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಕೃಷ್ಣಾ ನದಿಗೂ 9 ಲಕ್ಷ ಕ್ಯೂಸೆಕ್ ಗೂ ಹೆಚ್ಚಿನ ಮಟ್ಟದ ನೀರು ಹರಿದು ಬರುತ್ತಿದೆ. ನಡುಗಡ್ಡೆಯ ಸಮೀಪ ವಾಸವಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next