Advertisement

ಮಲೆನಾಡಿನಲ್ಲಿ ಮುಂದುವರಿದ ಮಳೆಯಬ್ಬರ: ಸಂಚಾರ ಅಸ್ತವ್ಯಸ್ತ

09:51 AM Oct 22, 2019 | Team Udayavani |

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರಿನಲ್ಲಿ ಹಲವೆಡೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

Advertisement

ತರೀಕೆರೆ ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು, ಮುಗಳಿ, ಶಿವನಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಮುಗಳಿ – ತಮಟದಹಳ್ಳಿ ಸಂಪರ್ಕ ಸ್ಥಗಿತವಾಗಿದೆ. ಇದರೊಂದಿಗೆ ಅಜ್ಜಂಪುರ – ಶಿವನಿ ಸಂಪರ್ಕ ಕೂಡಾ ಬಂದಾಗಿದೆ.

ಸೇತುವೆ ಮುಳುಗಡೆಯಿಂದ ಜನ, ವಾಹನ ಸವಾರರು ಸಂಚಾರ ಸಾದ್ಯವಾಗದೇ ಪರದಾಟ ಪಡುತ್ತಿದ್ದಿದ್ದಾರೆ.

ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಭಾರೀ ಮಳೆಯಿಂದ ಜಮೀನುಗಳು ಜಲಾವೃತವಾಗಿದೆ.

Advertisement

ಕಡೂರು ತಾಲೂಕಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಮನೆಗಳಿಗೆ ಕೆರೆಯ ನೀರು ನುಗ್ಗಿದೆ. ಹಿರೇಗರ್ಜೆ ಗ್ರಾಮದ ಐದು ಮನೆಗಳಿಗೆ ನೀರು ನುಗ್ಗಿದೆ .
ಭಾರೀ ಮಳೆಗೆ ಕೆರೆಗಳು ಕೋಡಿ ಬೀಳುತ್ತಿದ್ದು, ಇದರಿಂದಾಗಿ ಗ್ರಾಮಕ್ಕೆ ನೀರು ನುಗ್ಗುತ್ತಿದೆ. ಕಳೆದ ಐದು ವರ್ಷದಲ್ಲೇ ಇದೇ ಮೊದಲ ಬಾರಿಗೆ ಕೆರೆಗಳು ಕೋಡಿ ಬೀಳುತ್ತಿದ್ದು, ಜನರು ಕಂಗಾಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next