Advertisement

ಬನ್ನಂಜೆ ಗರಡಿ ರಸ್ತೆಯ 30ಕ್ಕೂ ಅಧಿಕ ಮನೆಗಳು ಜಲಾವೃತ: ಉಕ್ಕಿ ಹರಿಯುತ್ತಿದೆ ಇಂದ್ರಾಣಿ ನದಿ

12:30 PM Jul 05, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ಸುರಿದ ಧಾರಾಕಾರ ಮಳೆಯಿಂದ ಉಡುಪಿ, ದೊಡ್ಡಣಗುಡ್ಡೆ, ಮಣಿಪಾಲ, ಪರ್ಕಳ, ಮಲ್ಪೆ, ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ಕೃತಕ ನೆರ ಆವರಿಸಿದೆ.

Advertisement

ಬನ್ನಂಜೆ ಮೂಡನಿಡಂಬೂರು ಗರಡಿ ರಸ್ತೆಯ ಸುತ್ತಮುತ್ತಲು ಪ್ರವಾಹ ಉಂಟಾಗಿದ್ದು, ಸುಮಾರು 30 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ.

ಜಲಾವೃತಗೊಂಡಿರುವ ಪ್ರದೇಶಕ್ಕೆ ಭೇಟಿ ನೀಡಿದ ನಗರ ಸಭೆ ಕಮೀಷನರ್‌, ಆರೋಗ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಕಾಲುವೆ ಬದಿ ಸಂಚರಿಸದಂತೆ, ಜನರು ಓಡಾಡದಂತೆ ಸುರಕ್ಷತ ದೃಷ್ಟಿಯಿಂದ ಟೇಪ್‌ ಗಳನ್ನು ಅಳವಡಿಸಿದ್ದಾರೆ.

ಧಾರಾಕಾರ ಮಳೆಯಿಂದ ಇಂದ್ರಾಣಿ ನದಿ ಉಕ್ಕಿ ಹರಿಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next