Advertisement

ರಾಯಚೂರು: ಭಾರೀ ವರ್ಷ ಧಾರೆಗೆ ಮಂತ್ರಾಲಯದ ಗೆಸ್ಟ್ ಹೌಸ್ ಜಲಾವೃತ

01:00 PM Jun 27, 2021 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ನಾನಾ ಅವಾಂತರ ಸೃಷ್ಟಿಯಾಗಿದೆ.  ಆದರೆ, ಮುಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Advertisement

ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಮಳೆ ನೀರು ಸಂಗ್ರಹಗೊಂಡು ಅವ್ಯವಸ್ಥೆ ಉಂಟಾಗಿದೆ. ಮದುವೆ ನಿಶ್ಚಯವಾಗಿದ್ದು, ಜನ ಪರದಾಡುವಂತಾಗಿದೆ. ಇನ್ನೂ ಮಂತ್ರಾಲಯ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿ ಜಲಾವೃತಗೊಂಡಿದೆ.

ಇನ್ನೂ ಮಸ್ಕಿ ತಾಲೂಕಿನ ಶಂಕರನಗರ ಕ್ಯಾಂಪ್ ನಲ್ಲಿ ಶನಿವಾರ ಸುರಿದ ಮಳೆಗೆ ನೂರಾರು ಮೇಕೆ, ಕೋಳಿಗಳು ಬಲಿಯಾಗಿವೆ. ಇನ್ನೂ ಜಿಲ್ಲಾದ್ಯಂತ ಶನಿವಾರ ರಾತ್ರಿಯಿಂದ ಜಿಟಿ ಜಿಟಿ ಮಳೆಯಾದರೆ, ರವಿವಾರ ಬೆಳಗ್ಗೆಯಿಂದ ಜೋರು ಮಳೆಯಾಗುತ್ತಿದೆ. ಇದರಿಂದ ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡ ರೈತರಿಗೆ ಇದರಿಂದ ಖುಷಿಯಾಗಿದೆ. ಈಗಾಗಲೇ ಬಿತ್ತನೆ ಮಾಡಿದ ರೈತರು ಈ ಮಳೆ ವರವಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next