Advertisement

ಕರಾವಳಿ ಪರಿಸರದಲ್ಲಿ ಗುಡುಗು,ಸಿಡಿಲು ಸಹಿತ ಉತ್ತಮ ಮಳೆ

08:33 PM Nov 13, 2020 | Suhan S |

ಮಂಗಳೂರು : ಒಮ್ಮೆಲೇ  ಸುರಿದ ಬಾರೀ ಮಳೆಯಿಂದಾಗಿ ಶುಕ್ರವಾರ ಸಂಜೆ ಜನಜೀವನ ಅಸ್ತವ್ಯಸ್ಥಗೊಂಡಿತು. ದೀಪಾವಳಿ ಹಬ್ಬಕ್ಕೆ ಖರೀದಿಯಲ್ಲಿ ತೊಡಗಿದ್ದ ಜನರಿಗೆ ಒಮ್ಮೆಲೇ ಸುರಿದ ಮಳೆಯಿಂದಾಗಿ ಖರೀದಿಗೆ ಅಡ್ಡಿಯಾಯಿತು.

Advertisement

ಕರಾವಳಿ ಪರಿಸರದಲ್ಲಿ ಶುಕ್ರವಾರ ಸಂಜೆ ಗುಡುಗು ಸಿಡಿಲಿನ ಸಹಿತ ಭಾರೀ ಮಳೆಯಾಗಿದೆ. ಮಂಗಳೂರಿನಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಭಾರೀ ಮಳೆಯಾಗಿದ್ದು, ನಗರ ಸೇರಿದಂತೆ, ಬಂಟ್ವಾಳ ತಾಲೂಕಿನ ಬಹುತೇಕ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು, ಮಿಂಚು, ಅರ್ಧ ತಾಸಿಗೂ ಹೆಚ್ಚು ಮಳೆಯ ಆರ್ಭಟ ಇತ್ತು. ಸಾಮಾಗ್ರಿಗಳನ್ನುಕೊಳ್ಳುವಲ್ಲಿ ನಿರತರಾಗಿದ್ದ ಜನರಿಗೆ ಏಕಾಏಕಿ ಸುರಿದ ಮಳೆಯಿಂದ ಹಬ್ಬದ ಶಾಪಿಂಗ್ ಗೆ ತುಸು ತೊಂದರೆ ಆಯಿತು.  ಪಟಾಕಿ, ಹೂಹಣ್ಣು, ಹಣತೆ, ಗೂಡುದೀಪ ವ್ಯಾಪಾರಸ್ಥಿರಿಗೂ ಮಳೆಯಿಂದಾಗಿ ವ್ಯಾಪಾರಕ್ಕೆ ತೊಂದರೆ ಉಂಟಾಯಿತು. ರೈನ್ ಕೋಟ್, ಕೊಡೆ ತಾರದಿದ್ದವರಿಗೆ ಸಂಜೆ ಕಚೇರಿಯಿಂದ ಮನೆಗೆ ತೆರಳಲು ಸಮಸ್ಯೆಯಾಯಿತು.

ಮಂಗಳೂರು ಸೇರಿದಂತೆ, ಕರಾವಳಿಯ ಕೆಲ ಪ್ರದೇಶದಲ್ಲಿ ಶುಕ್ರವಾರ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಉಡುಪಿಯ ಕಟಪಾಡಿ,ಕಾಪು, ಕುಂದಾಪುರ ಪರಿಸರದಲ್ಲಿ ಅಲ್ಪಸ್ವಲ್ಪ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next