Advertisement

ಬಿರುಗಾಳಿ-ಮಳೆಗೆ ಭತ್ತ ಬೆಳೆಗಾರರು ಕಂಗಾಲು

04:49 PM May 11, 2020 | Suhan S |

ಸಿದ್ದಾಪುರ: ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರವಿವಾರ ಗಂಟೆಗೂ ಹೆಚ್ಚಾ ಬಿರುಗಾಳಿ ಸಹಿತ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು.

Advertisement

ಮಧ್ಯಾಹ್ನ 2:30ಕ್ಕೆ ಆರಂಭವಾದ ಬಿರುಗಾಳಿ ಸಹಿತ ಭಾರಿಮಳೆ ಸುಮಾರು ಒಂದೂ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದಾದ ಬಳಿಕ ಮತ್ತೆ ಸಣ್ಣಗೆ (ಜಿನುಗು) ಮಳೆ ಆರಂಭಗೊಂಡು ಸಂಜೆ 6:30ರವರೆಗೂ ಇತ್ತು. ಇದರಿಂದಾಗಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಮತ್ತು ಇತರೆಡೆ ಖಾಲಿ ಸ್ಥಳಗಳಲ್ಲಿ ಒಣಗಿಸಲು ಹಾಕಿದ್ದ ಭತ್ತ ನೆನೆದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಇನ್ನೂ ಸಿದ್ದಾಪುರ ಹೋಬಳಿ ವ್ಯಾಪ್ತಿಯ ಶ್ಯಾಲಿಗನೂರು ಆಲಿಕಲ್ಲು ಮಳೆ ಸುರಿದ್ದಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಕಾಳುಗಳು ನೆಲಕ್ಕುದಿರಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕೂಡಲೇ ನೆರವಿಗೆ ಧಾವಿಸಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಬೆನ್ನೂರು, ಉಳೇನೂರು, ಈಳಿಗನೂರು, ಜಮಾಪುರ, ಕಕ್ಕರಗೋಳ, ನಂದಿಹಳ್ಳಿ ಗ್ರಾಮಗಳಲ್ಲೂ ಬಿರುಗಾಳಿ ಸಹಿತ ಆಲಿಕಲ್ಲಿ ಮಳೆಯಾಗಿದ್ದು, ಭತ್ತ ಹಾನಿಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next