Advertisement

ಚಿತ್ತಾ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ

12:49 PM Oct 22, 2019 | Suhan S |

ಮಹಾಲಿಂಗಪುರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಒಂಭತ್ತು ಗ್ರಾಮಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರವಿವಾರ ಮಹಾಲಿಂಗಪುರದಲ್ಲಿ 135.4 ಸೆ.ಮಿ ಮಳೆಯಾಗಿದೆ.

Advertisement

ಧರೆಗುರುಳಿದ ಮರಗಳು: ನಿರಂತರ ಮಳೆಯಿಂದಾಗಿ ಮಹಾಲಿಂಗಪುರ, ಬೆಳಗಲಿ, ಬಿಸನಾಳ, ಢವಳೇಶ್ವರ, ಮಾರಾಪುರ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲಿನ ಮತ್ತು ಹೊಲಗದ್ದೆಗಳಲ್ಲಿ ಮರಗಳುನೆಲಕ್ಕುರುಳಿವೆ. ಇದರಿಂದಾಗಿ ಹಲವಡೆ ಸಂಚಾರಕ್ಕೆ ತೊಂದರೆಯಾಗಿದೆ.

ಮನೆಗಳಿಗೆ ನುಗ್ಗಿದ ನೀರು: ಪಟ್ಟಣದ ಸಿದ್ದ ಸರೋವರದ ಕೆರೆ ತುಂಬಿ ನೀರು ಚರಂಡಿಗೆ ಹರಿದ ಪರಿಣಾಮವಾಗಿ ಚಿಮ್ಮಡ ಗಲ್ಲಿಯಲ್ಲಿ 20ಕ್ಕೂ ಅಧಿ ಕ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಮನೆಯ ಸಾಮಾನುಗಳ ರಕ್ಷಣೆಗಾಗಿ ಪರದಾಡಿದರು.

ಬಿದ್ದ ಮನೆಗಳು: ವಿವಿಧ ವಾರ್ಡ್‌ಗಳಲ್ಲಿ ಹತ್ತಕ್ಕೂ ಅಧಿಕ ಮನೆಗಳು ಬಿದ್ದಿವೆ. ವಿಪರೀತ ಮಳೆಯ ಕಾರಣ ಬಹುತೇಕ ಚರಂಡಿಗಳು ತುಂಬಿ, ರಸ್ತೆಗಳ ಮೇಲೆ ನೀರು ಹರಿದ ಕಾರಣ ಸಾರ್ವಜನಿಕರು ಪರದಾಡಿದರು.

ರನ್ನಬೆಳಗಲಿಯಲ್ಲಿ ಆವಾಂತರ: ನೆರೆಯ ರನ್ನಬೆಳಗಲಿಯಲ್ಲಿ ಹಳ್ಳದ ನೀರು ತುಂಬಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಅಂಗನವಾಡಿಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿವೆ. ಪಟ್ಟಣದ ಹನುಮಾನ ದೇವಸ್ಥಾನದಿಂದ ಹಿಡಿದು-ಯಲ್ಲಮ್ಮ ದೇವಸ್ಥಾನದವರೆಗಿನ ರಸ್ತೆಯ ಮೇಲೆ ಹಳ್ಳದ ನೀರು ಹೊಳೆಯಂತೆ ಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯುಂಟಾಗಿದೆ. ಪಟ್ಟಣದಲ್ಲಿ ಸಿಮೆಂಟ್‌ ಅಂಗಡಿ, ದಾಬಾ, ಬ್ಯಾಂಕ್‌, ಅಂಗನವಾಡಿ ಕಟ್ಟಡಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.

Advertisement

ಅಪಾರ ಬೆಳೆ ನಾಶ: ನಿರಂತರ ಮಳೆಯಿಂದಾಗಿ ಈ ಭಾಗದಲ್ಲಿನ ಕಬ್ಬು, ಗೋವಿನ ಜೋಳ, ಅರಿಶಿನ, ಕಾಯಿಪಲ್ಲೆ ಸೇರಿದಂತೆ ಎಲ್ಲ ಬೆಳೆಗಳು ಜಲಾವೃತವಾಗಿವೆ.

ರಸ್ತೆಗಳು ಬಂದ್‌: ನಿರಂತರ ಮಳೆಯ ಪರಿಣಾಮ ಹಳ್ಳಗಳು ತುಂಬಿ ಹರಿದ ಪರಿಣಾಮ ಕೆಸರಗೊಪ್ಪ-ಹಂದಿಗುಂದ, ಮಹಾಲಿಂಗಪುರ-ಅಕ್ಕಿಮರಡಿ ರಸ್ತೆಗಳು ಬಂದ್‌ ಆಗಿ ಉಭಯ ಗ್ರಾಮಗಳ ಸಂಪರ್ಕ ಕಡಿತವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next