Advertisement

ಭಾರೀ ಮಳೆ-ಗಾಳಿಗೆ 5 ಮನೆ ಜಖಂ

07:32 AM May 21, 2019 | Suhan S |

ಕೂಡ್ಲಿಗಿ: ತಾಲೂಕಿನ ಹೊಸಹಳ್ಳಿ ಮತ್ತು ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿರುಗಾಳಿ ಪರಿಣಾಮ 5 ಮನೆಗಳ ಜಖಂಗೊಂಡ ಘಟನೆ ರವಿವಾರ ತಡರಾತ್ರಿ ನಡೆದಿದೆ.

Advertisement

ತಾಲೂಕಿನ ಗುಡೇಕೋಟೆ ಹೋಬಳಿಯ ಗಂಡಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ನುಂಕನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಗೆ ಗ್ರಾಮದ ಗ್ರಾಮದ ಕಾಂಚನಮ್ಮ, ಭಾಗ್ಯಮ್ಮ, ರತ್ನಮ್ಮ, ಹೇಮಾವತಿ, ಸಾಕಮ್ಮ ಎಂಬುವರ 5 ವಾಸದ ಮನೆಗಳು ಜಖಂ ಆಗಿದ್ದು, ಮನೆ ಕಳೆದುಕೊಂಡ ರೈತ ಕುಟುಂಬಗಳು ಬೀದಿಗೆ ಬಿದ್ದಿದ್ದು, ಕಂದಾಯ ಇಲಾಖೆ ಇವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ನೊಂದ ಕುಟುಂಬಗಳು ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ತಡರಾತ್ರಿ ಗುಡುಗು ಸಹಿತ ಬಿರುಗಾಳಿ ಮಳೆ ಆರಂಭವಾಗಿದ್ದನ್ನು ತಿಳಿದು ತಾಲೂಕಿನ ಪಿಚ್ಚಾರಹಟ್ಟಿ ಗ್ರಾಮದಲ್ಲಿ ಇಮಾಮ್‌ ಸಾಬ್‌ ಮರದಡಿ ಕಟ್ಟಿದ್ದ ಎತ್ತುಗಳನ್ನು ಮನೆಯೊಳಗೆ ಕಟ್ಟಲು ಯತ್ನಿಸುತ್ತಿರುವಾಗ ಮನೆಯ ಒಡೆಯನನ್ನು ಕೊಂಬಿನಿಂದ ತಿವಿಯುವ ಮೂಲಕ ದೂರ ತಳ್ಳಿದೆ. ಮನೆ ಮಾಲೀಕ ಅಲ್ಲಿಂದ ಮನೆಯೊಳಗೆ ಹೋಗುವಷ್ಟರಲ್ಲಿ ಎತ್ತುಗಳಿಗೆ ಸಿಡಿಲು ಬಡಿದಿದೆ. ಮಾಲೀಕನ ಕಣ್ಣೆದುರಿಗೆ ಎರಡು ಎತ್ತು ಸಾವನ್ನಪ್ಪಿವೆ.

Advertisement

Udayavani is now on Telegram. Click here to join our channel and stay updated with the latest news.

Next