Advertisement

ಕಲಬುರಗಿ-ರಾಯಚೂರು ಸಂಪರ್ಕ ಕಡಿತ

04:53 PM Aug 18, 2020 | Suhan S |

ಶಹಾಪುರ: ನಾರಾಯಣಪುರದ ಬಸವಸಾಗರ ಜಲಾಶಯದಿಂದ 2.60 ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಕೊಳ್ಳೂರ(ಎಂ) ಸೇತುವೆ ಮುಳಗಡೆಯಾಗಿದ್ದು, ಕಲಬುರಗಿ-ರಾಯಚೂರು ಸಂಪರ್ಕ ಕಡಿತಗೊಂಡಿದೆ.

Advertisement

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್‌ ಜಗನ್ನಾಥರಡ್ಡಿ, ನದಿ ತೀರದ ಜನತೆ ಎಚ್ಚರದಿಂದ ಇರಬೇಕು. ಜನರು ಸೇರಿದಂತೆ ಜಾನುವಾರುಗಳನ್ನು ನದಿ ತೀರಕ್ಕೆ ಬಿಡಬಾರದು ಎಂದು ತಿಳಿಸಿದರು. ಅಲ್ಲದೆ ಸ್ಥಳದಲ್ಲಿದ್ದ ಗ್ರಾಮಲೇಖ ಪಾಲಕರಿಗೆ ಪ್ರವಾಹದಿಂದ ಹಾನಿಗೊಳಗಾದ ಬೆಳೆ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದರು.

ಅಲ್ಲದೆ ಸೇತುವೆ ಬಳಿ ಯಾರೊಬ್ಬರು ಸುಳಿಯದಂತೆ ಎಚ್ಚರ ವಹಿಸಬೇಕು. ದಂಡೆಯಲ್ಲಿ ಪೊಲೀಸ್‌ ಕಾವಲು ಇರಲಿದೆ. ಅಧಿಕಾರಿಗಳು ತೀವ್ರ ನಿಗಾವಹಿಸಬೇಕು. ಮಹಾರಾಷ್ಟ್ರದಲ್ಲಿ ಸತತ ಮಳೆಯಾಗಿದ್ದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೂ ಬರಬಹುದು. ಹೀಗಾಗಿ ಕಂದಾಯ ಇಲಾಖೆ ಗ್ರಾಮಲೇಖಪಾಲಕರು ನೀರು ಹರಿಬಿಡುವ ಕುರಿತು ಕ್ಷಣ ಕ್ಷಣ ಮಾಹಿತಿ ಪಡೆದು ಗ್ರಾಮಗಳ ಜನರಿಗೆ ಎಚ್ಚರ ವಹಿಸಲು ಸೂಚಿಸುತ್ತಿರಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next