Advertisement

ವಿಜಯಪುರ ಭರ್ಜರಿ ಮಳೆ-ವಿದ್ಯುತ್ ಕಡಿತ

09:54 AM Oct 04, 2019 | sudhir |

ವಿಜಯಪುರ: ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ತಗ್ಗು ಪ್ರದೇಶಗಳಿಗೆ ಸೇರಿದಂತೆ ಮಳೆ ನೀರು ಹಲವು ಮನೆಗಳಿಗೂ ನುಗ್ಗಿದೆ. ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

Advertisement

ನಗರದ ಶಾಪೇಟೆಯ ಹಲವು ಮನೆಗಳಿಗೆ ನುಗ್ಗಿದೆ. ಹುತಾತ್ಮರ ವೃತ್ತ ಹಾಗೂ ಮನಗೂಳಿ ಅಗಸಿ ಪ್ರದೇಶದಲ್ಲಿ ಮಳೆಯ ಭಾರಿ ಪ್ರಮಾಣದ ನೀರು ಹರಿಯುತ್ತಿರುವ ಕಾರಣ ಸಂಚಾರ ಅಸ್ತವ್ಯಸ್ತವಾಗಿದೆ. ಮನಗೂಳಿ ಅಗಸಿ ಪ್ರದೇಶದಲ್ಲಿ ವಾಹನ ಸಂಚಾರ ಸಮಸ್ಯೆ ಉಂಟಾಗಿ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ನಗರದ ಬಹುತೇಕ ರಸ್ತೆಗಳಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next