Advertisement

ಮಹಾರಾಷ್ಟ್ರ: ಬಿಸಿಲ ಝಳಕ್ಕೆ 13 ಮಂದಿ ಸಾವು

12:30 AM Apr 17, 2023 | sudhir |

ಮುಂಬಯಿ: “ಮಹಾರಾಷ್ಟ್ರ ಭೂಷಣ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಕನಿಷ್ಠ 13 ಮಂದಿ ತೀವ್ರ ಬಿಸಿಲು ತಾಳಲಾರದೆ ಅಸುನೀಗಿದ್ದಾರೆ.

Advertisement

600ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನವಿಮುಂಬಯಿಯ ಖರ್‌ಘರ್‌ನಲ್ಲಿ ರವಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನಿಂದ ಸುಮಾರು 20 ಲಕ್ಷ ಮಂದಿ ಭಾಗವಹಿಸಿದ್ದರು.

ಬಿಸಿಲಿನ ತಾಪಕ್ಕೆ ಅನೇಕರು ತಲೆ ತಿರುಗಿ ಬಿದ್ದರು. ಆರು ಗಂಟೆ ಕಾಲ ಬಿಸಿಲಿನಲ್ಲಿ ಜನರು ಬೆಂದು ಹೋದರು. ಅಸ್ವಸ್ಥರಾದವರನ್ನು ಕಮೋಥೆಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಎಂ ಏಕನಾಥ್‌ ಶಿಂಧೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next