Advertisement

ಸ್ವಚ್ಛತೆಯಿದ್ದಲ್ಲಿ ಆರೋಗ್ಯ: ಡಾ|ಅಜಿತ್‌ ಪ್ರಕಾಶ್‌

10:47 PM Oct 04, 2019 | Team Udayavani |

ಕಾರ್ಕಳ: ಸ್ವಚ್ಛತೆಯೆಂದರೆ ಅದು ಕೇವಲ ಒಂದು ದಿನದ ಕಾರ್ಯವಾಗದೇ ನಿತ್ಯ ನಿರಂತರವಾಗಿರಬೇಕು. ಸ್ವಚ್ಛತೆ ಯಿದ್ದಲ್ಲಿ ಮಾತ್ರ ನಾವು ಆರೋಗ್ಯ ಕಾಪಾಡಿ ಕೊಳ್ಳಬಹುದೆಂದು ಡಾ| ಅಜಿತ್‌ ಪ್ರಕಾಶ್‌ ಹೇಳಿದರು.

Advertisement

ಅ. 2ರಂದು ಸಾಣೂರು ಗ್ರಾ.ಪಂ. ವಠಾರದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಣೂರು ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವರಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಧು ಎಂ.ಸಿ., ಗ್ರಾ.ಪಂ. ಸದಸ್ಯ ಕರುಣಾಕರ ಕೋಟ್ಯಾನ್‌, ಪ್ರಕೃತಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಅಶೋಕ್‌ ಕುಮಾರ್‌ ಕೆ., ಪ್ರಕೃತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ಬಿ. ಪದ್ಮನಾಭ ಗೌಡ, ಪ್ರಕೃತಿ ನ್ಯಾಶನಲ್‌ ಸ್ಕೂಲ್‌ನ ಪ್ರಾಂಶುಪಾಲ ಡಾ| ರಾಕಿ ಮಥಾಯಿ ಆ್ಯಂಟನಿ ಉಪಸ್ಥಿತರಿದ್ದರು.

ಶಿಕ್ಷಕಿ ಯಶಸ್ವಿನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಾರಾನಾಥ್‌ ವಂದಿಸಿ ದರು. ಕಾರ್ಯಕ್ರಮಕ್ಕೂ ಮುಂಚೆ ಪ್ರಕೃತಿ ವಿದ್ಯಾಕೇಂದ್ರದ ಆವರಣದಿಂದ ಜಾಥಾ ನಡೆಯಿತು. ಆರೋಗ್ಯಪೂರ್ಣ ಸ್ವಚ್ಛ ಸಮಾಜದ ನಿರ್ಮಾಣ ಎಂಬ ಧ್ಯೇಯ ವಾಕ್ಯ ದೊಂದಿಗೆ ಸಾಣೂರು ಗ್ರಾಮ ಪಂಚಾಯತ್‌ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next