Advertisement

ವಲಸಿಗರ ತಾಣಕ್ಕೆ ಆರೋಗ್ಯ ಇಲಾಖೆ ಭೇಟಿ

04:17 PM Dec 13, 2022 | Team Udayavani |

ಎಚ್‌.ಡಿ.ಕೋಟೆ: ಉದಯವಾಣಿ ವರದಿಯಿಮದ ಎಚ್ಚೆತ್ತ ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಪಟ್ಟಣದಲ್ಲಿ ಬೀಡುಬಿಟ್ಟಿದ್ದ ಆಂಧ್ರಮೂಲದ ವಲಸಿಗರ ತಾಣಕ್ಕೆ ಭೇಟಿ ನೀಡಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಚುಚ್ಚು ಮತ್ತು ಔಷಧಿಗಳನ್ನು ವಿತರಿಸಿದರು.

Advertisement

ಪಟ್ಟಣದ ಹುಣಸೂರು ಬೇಗೂರು ಮುಖ್ಯರಸ್ತೆ ಬದಿಯ ಜೆ.ಎಸ್‌.ಎಸ್‌. ಮಂಗಳ ಮಂಟಪದ ಬಳಿ ಬಯಲಿನಲ್ಲಿ ಕಳೆದ 3 ವರ್ಷಗಳಿಂದ ಆಂಧ್ರ ಮೂಲದ ಸುಮಾರು 10 ಬಡಕುಟುಂಬಗಳು ಜೀವನೋಪಾಯಕ್ಕಾಗಿ ವಲಸೆ ಬಂದು ಬೀಡು ಬಿಟ್ಟಿದ್ದರೂ ಇಲ್ಲಿಯ ತನಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಮೂಲ ಸೌಕರ್ಯ ವಂಚಿತರಾದ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸದೇ ಇರುವ ಬಗ್ಗೆ ಉದಯವಾಣಿ ಸೋಮವಾರ ” 20 ಮಕ್ಕಳು ಶಿಕ್ಷಣದಿಂದ ವಂಚಿತ’ ಎನ್ನುವ ತಲೆ ಬರದಹದಡಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.

ಪತ್ರಿಕೆಯ ಸುದ್ದಿಯಿಂದ ಎಚ್ಚೆತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌, ಹಿರಿಯ ಆರೋಗ್ಯ ಮಹಿಳಾ ಸುರಕ್ಷಾಣಾಧಿಕಾರಿ ಸರಳಾ, ದೇವೇಂದ್ರಮ್ಮ, ರವಿರಾಜ್‌, ವಿದ್ಯಾ ತಂಡ ನಿರಾಶ್ರಿತರ ತಾಣಕ್ಕೆ ಭೇಟಿ ನೀಡಿ ಆರೋಗ್ಯ ಕುರಿತು ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಗರ್ಭಿಣಿಯರು ಮಗುವಿನ ಬೆಳವಣಿಗೆ ಮತ್ತು ಅನಾರೋಗ ರಕ್ಷಣೆಗೆ ಪೂರಕ ವಾದ ಚುಚ್ಚು ಮದ್ದುಗಳನ್ನು ಪಡೆದುಕೊಂಡಿಲ್ಲ. ಸ್ಥಳದಲ್ಲೇ ಇಬ್ಬರು ಗರ್ಭಿಣಿಯರಿಗೆ ಟಿ.ಡಿ ಚುಚ್ಚುಮದ್ದು ನೀಡಲಾಯಿತು. ಮಕ್ಕಳಿಗೆ ಮೊದಲ ಹಂತದ ಎಂ.ಆರ್‌, ಪೋಲಿಯೋ ವ್ಯಾಕ್ಸಿನ್‌, ವಿಟಮಿನ್‌ ಎ ದ್ರಾವಣ ನೀಡಿ ವಲಸಿಗರಿಗೆ ಸಾಂಕ್ರಾಮಿಕ ರೋಗದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next