Advertisement

Fraud case ವಾಟ್ಸಾಪ್‌ ಮೆಸೇಜ್‌ ಮಾಡಿ ಲಕ್ಷ ದೋಚಿದರು

12:47 AM Nov 01, 2023 | Team Udayavani |

ಕುಂದಾಪುರ: ಅರೆಕಾಲಿಕ ಕೆಲಸ ಇದೆ ಎಂದು ವಾಟ್ಸಾಪ್‌ನಲ್ಲಿ ಮೆಸೇಜ್‌ ಮಾಡಿ ಬೇರೆ ಬೇರೆ ಲಿಂಕ್‌ಗಳನ್ನು ಒತ್ತಲು ಹೇಳಿ 1.6 ಲಕ್ಷ ರೂ. ವಂಚಿಸಿದ ಪ್ರಕರಣ ನಡೆದಿದೆ.

Advertisement

ಶ್ವೇತಾ (35) ಕುಂದಾಪುರ ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಗಳು ವಾಟ್ಸಪ್‌ ಮೆಸೆಜ್‌ ಮಾಡಿ ಪಾರ್ಟ್‌ ಟೈಮ್‌ ಜಾಬ್‌ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಬೇರೆ ಬೇರೆ ಲಿಂಕ್‌ಗಳನ್ನು ಕಳುಹಿಸಿ ಟಾಸ್ಕ್ ಗಳನ್ನು ನೀಡಿ ಟಾಸ್ಕ್ ಗಳಿಗಾಗಿ ಹಣ ಪಾವತಿಸುವಂತೆ ಹೇಳಿ ಹಂತ ಹಂತವಾಗಿ 1.63 ಲಕ್ಷ ರೂ. ಪಡೆದು ಉದ್ಯೋಗ ನೀಡದೇ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿದ್ದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next