Advertisement

ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆಗೈದ ಪತಿ

04:52 PM Sep 06, 2019 | Team Udayavani |

ಬಳ್ಳಾರಿ: ಮದ್ಯದ ಅಮಲಿನಲ್ಲಿದ್ದ ಪತಿ ಮಹಾಶಯ ಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಲೆಗೈದ ಘಟನೆ ಬಳ್ಳಾರಿ  ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ.

Advertisement

ಜಿಲ್ಲೆಯ ಹಡಗಲಿ ತಾಲೂಕಿನ ಜ್ಯೋತಿಬಾಯಿ (40) ಕೊಲೆಯಾದ ಕೂಲಿ ಕಾರ್ಮಿಕ ಮಹಿಳೆ. ಆಕೆಯ ಪತಿ ವಾಚ್ಯಾನಾಯ್ಕ ಎಂಬುವವರೇ ಕೊಲೆಗೈದು ಹಡಗಲಿ ಪೊಲೀಸರ ಅತಿಥಿಯಾಗಿದ್ದಾನೆ.

ಗುರುವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವನೆ ಮಾಡಿ ಮನೆಗೆ ತೆರಳಿದ್ದ ವಾಚ್ಯಾನಾಯ್ಕ ಅವರೊಂದಿಗೆ ಪತ್ನಿ ಜ್ಯೋತಿಬಾಯಿ ಅವರು ಜಗಳಕ್ಕಿಳಿದಿದ್ದಾರೆ. ಅದೇ ಸಿಟ್ಟಿನಿಂದಾಗಿ ರಾತ್ರಿವೇಳೆ ತನ್ನ ಪಕ್ಕದಲ್ಲೇ ಮಲಗಿದ್ದ ಆಕೆಯ ಕತ್ತಿಗೆ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾರೆ. ನಿದ್ರೆಗೆ ಜಾರಿದ್ದ ಜ್ಯೋತಿಬಾಯಿ ಅವರು ರಕ್ತದ ಮಡುವಿನಲ್ಲೇ ಚಿರನಿದ್ರೆಗೆ ಜಾರಿದ್ದಾರೆ.

ಪ್ರತಿದಿನವೂ ಮದ್ಯ ಸೇವನೆ ಮಾಡಿ ಬರುತ್ತಿರುವುದರಿಂದ ಜ್ಯೋತಿಬಾಯಿ ಪತಿಯೊಂದಿಗೆ ಜಗಳವಾಡುತ್ತಿದ್ದರು. ಕಳೆದ ರಾತ್ರಿ ವಿಪರೀತ ಮದ್ಯ ಸೇವನೆ ಮಾಡಿದ್ದ ಪತಿ ವಾಚ್ಯಾನಾಯ್ಕ ಪತ್ನಿಯನ್ನು  ಕೊಲೆ ಮಾಡಿದ್ದಾರೆ. ಹತ್ತು ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಈ ದಂಪತಿ ಕೂಲಿ, ನಾಲಿ ಮಾಡಿಕೊಂಡೇ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತಿದ್ದರು. ಹಡಗಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next