Advertisement

Santana row: ಸನಾತನ ವಿವಾದಕ್ಕೆ ತಾನು ಕರುಣಾನಿಧಿ ಮೊಮ್ಮಗ, ಕ್ಷಮೆ ಕೇಳಲ್ಲ: ಉದಯನಿಧಿ

11:36 PM Oct 22, 2024 | Team Udayavani |

ಚೆನ್ನೈ: “ನಾನು ಕರುಣಾನಿಧಿಯವರ ಮೊಮ್ಮಗ. ಸನಾತನ ಧರ್ಮದ ವಿರುದ್ಧ ನೀಡಿದ್ದ ತನ್ನ ಹೇಳಿಕೆಗಾಗಿ ಕ್ಷಮೆಯಾಚಿಸುವುದಿಲ್ಲ ಎಂದು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ ತಿಳಿಸಿದ್ದಾರೆ.

Advertisement

ಚೆನ್ನೈನಲ್ಲಿ ಮಾತನಾಡಿದ ಅವರು,ಸನಾತನ ಧರ್ಮವು ಮಹಿಳೆಯರಿಗೆ ವಿದ್ಯಾಭ್ಯಾಸ ನಿರಾಕರಿಸಿತು, ಮನೆಯಾಚೆ ಕಾಲಿಡಲು ನಿರ್ಬಂಧಿಸಿತು ಅಲ್ಲದೆ ಸತಿ ಸಹಗಮನಕ್ಕೆ ಒಳಗಾಗಬೇಕಿತ್ತು. ಅದನ್ನು  ಪೆರಿಯಾರ್‌, ಅಣ್ಣಾದೊರೈ ಮತ್ತು ಕರುಣಾನಿಧಿ ವಿರೋಧಿಸಿದ್ದರು. ಆ ಚಿಂತನೆಯನ್ನೇ ನಾನು ವ್ಯಕ್ತಪಡಿಸಿದ್ದೇನೆ ಎಂದರು. ಕಳೆದ ವರ್ಷ ಉದಯನಿಧಿ, ಸನಾತನ ಧರ್ಮವನ್ನು ಮಾರಕ ಕಾಯಿಲೆಗಳಿಗೆ ಹೋಲಿಸಿ ಸುದ್ದಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next