Advertisement
ಬನ್ನಿ ಹಾಗಾದರೆ ಯಾರು ಆ ವ್ಯಕ್ತಿ ಏನು ಅವರ ಸಾಧನೆ ಚುನಾವಣೆಯಲ್ಲಿ ನಿರಂತರ ಸೋತರೂ ಮತ್ತೆ ಮತ್ತೆ ಸ್ಪರ್ಧಿಸಲು ಎಂದು ಕಾರಣ ಎಂಬುದನ್ನು ತಿಳಿಯೋಣ.
Related Articles
Advertisement
ಚುನಾವಣಾ ರಾಜ:ಲೋಕಸಭೆ ಚುನಾವಣೆಗೆ ಏಪ್ರಿಲ್ 19 ರಿಂದ ಮತದಾನ ಆರಂಭವಾಗಲಿದೆ. 65 ವರ್ಷದ ಪದ್ಮರಾಜನ್ ಈಗ ತಮಿಳುನಾಡಿನ ಧರ್ಮಪುರಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೆ ಪದ್ಮರಾಜನ್ ಇಲ್ಲಿಯವರೆಗೂ ಯಾವುದೇ ಚುನಾವಣೆಯನ್ನು ಬಿಟ್ಟುಕೊಟ್ಟಿಲ್ಲ. ಅಷ್ಟು ಮಾತ್ರವಲ್ಲದೆ ನರೇಂದ್ರ ಮೋದಿಯಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿಯವರ ವಿರುದ್ಧ ಸ್ಪರ್ಧೆಗಿಳಿದು ಸೋತಿದ್ದಾರೆ. ಇಷ್ಟಾದರೂ ಚುನಾವಣೆಗೆ ಸ್ಪರ್ಧಿಸುವ ಅಸೆ ಮಾತ್ರ ಕಡಿಮೆಯಾಗಿಲ್ಲ, ಆ ಕಾರಣಕ್ಕೆ ಕೆಲವರು ಅವರನ್ನು ‘ಚುನಾವಣಾ ರಾಜ’ ಎಂದು ಕರೆಯುತ್ತಿದ್ದರು. ಅಲ್ಲದೆ ದೇಶದಲ್ಲಿ ಅತಿ ಹೆಚ್ಚು ಬರು ಚುನಾವಣೆಯಲ್ಲಿ ಸೋತಿರುವ ಪದ್ಮರಾಜನ್ ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕಾಣಿಸಿಕೊಂಡಿದೆ. ಯಾರೇ ಅಭ್ಯರ್ಥಿಯಾದರೂ ತಲೆಕೆಡಿಸಿಕೊಳ್ಳಲ್ಲ:
ಪದ್ಮರಾಜನ್ ಹೇಳುವುದು ಒಂದೇ ನನಗೆ ಗೆಲುವು ಮುಖ್ಯವಲ್ಲ ಚುನಾವಣೆಯಲ್ಲಿ ಭಾಗವಹಿಸುವುದು ಮುಖ್ಯ, ನನ್ನ ಎದುರು ಯಾರೇ ಅಭ್ಯರ್ಥಿಯಾದರೂ ನಾನು ತಲೆಕೆಡಿಸಿಕೊಳ್ಳಲ್ಲ ಯಾಕೆಂದರೆ ನನಗೆ ಗೆಲುವು ಮುಖ್ಯವಲ್ಲ ಹಾಗಾಗಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸರಿ ನಾನು ಅವರ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಾರೆ. ಆರ್ಥಿಕ ನಷ್ಟ :
ಕಳೆದ ಸುಮಾರು ಮೂರೂ ದಶಕಗಳಿಂದ ಕೇವಲ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ಪದ್ಮರಾಜನ್ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರ ಮತ್ತು ಅವರ ಖರ್ಚುವೆಚ್ಚಗಳಿಗೆ ಅವರ ಕೈಯಿಂದಲೇ ಹಣ ಖರ್ಚು ಮಾಡುತ್ತಿದ್ದರಿಂದ ಆರ್ಥಿಕ ನಷ್ಟವನ್ನೂ ಎದುರಿಸಿದ್ದರು. ಚುನಾವಣೆಯಲ್ಲಿ ಶೇಕಡಾ 16ರಷ್ಟಾದರೂ ಮತ ಪಡೆಯಬೇಕು ಇಲ್ಲವಾದರೆ ಠೇವಣಿ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಗೊತ್ತಿದ್ದರೂ ಸ್ಪರ್ಧೆ ಮಾಡುವ ಉತ್ಸಾಹ ಕಡಿಮೆಯಾಗಿಲ್ಲ, ಇದರ ಫಲವಾಗಿ ಕಳೆದ ಬಾರಿ ಪದ್ಮರಾಜನ್ 25 ಸಾವಿರ ರೂ. ಕಳೆದುಕೊಂಡಿದ್ದರಂತೆ.