Advertisement

ಕುಡಿದ ಅಮಲಿನಲ್ಲಿ ಬಿದ್ದು ಯುವಕ ಸಾವು: ಕೊಲೆ ಎಂದು ದೂರು ನೀಡಿದ ದಾರಿಹೋಕರು

09:51 AM Apr 22, 2022 | Team Udayavani |

ಬೆಂಗಳೂರು: ಕುಡಿದ ಅಮಲಿನಲ್ಲಿ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಆಯ ತಪ್ಪಿ ಸಿಮೆಂಟ್‌ ಇಟ್ಟಿಗೆ ಮೇಲೆ ಬಿದ್ದು ತೀವ್ರ ರಕ್ತಸ್ರಾವವಾಗಿ ಯುವಕ ಮೃತಪಟ್ಟಿರುವ ಘಟನೆ ಗೋವಿಂದರಾಜನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಾಗಡಿ ರಸ್ತೆಯ 5ನೇ ಕ್ರಾಸ್‌ನ ನಿವಾಸಿ ಉಮೇಶ್‌ (25) ಮೃತ ಯುವಕ.

ಮಾಗಡಿ ರಸ್ತೆಯ ವೀರೇಶ್‌ ಚಿತ್ರಮಂದಿರದ ಸಮೀಪವಿರುವ ಲಕ್ಷೀ ಆಟೋ ಮೊಬೈಲ್ಸ್‌ ಶಾಪ್‌ ಬಳಿ ಘಟನೆ ನಡೆದಿದೆ.

ಇದನ್ನೂ ಓದಿ:ಸಿಐಎಸ್ಎಫ್ ಯೋಧರ ಬಸ್ ಮೇಲೆ ಉಗ್ರ ದಾಳಿ: ಎಎಸ್ಐ ಹುತಾತ್ಮ; ಇಬ್ಬರಿಗೆ ಗಾಯ

ಉಮೇಶ್‌ ಗೂಡ್ಸ್‌ ಆಟೋ ಚಾಲಕನಾಗಿದ್ದು, ನಿತ್ಯ ಕೆಲಸ ಮುಗಿಸಿದ ನಂತರ ರಾತ್ರಿ ವೇಳೆ ಮದ್ಯ ಸೇವಿಸುವ ಚಟ ಹೊಂದಿದ್ದ. ಅದೇ ರೀತಿ ಬುಧವಾರ ರಾತ್ರಿ ಕೂಡ ಕಲ್ಯಾಣಮಂಟಪವೊಂದರಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ರಾತ್ರಿ 10.30ರ ಸಮಯದಲ್ಲಿ ಮನೆಗೆ ಬರುವುದಾಗಿಯೂ ತಂದೆಗೆ ಕರೆ ಮಾಡಿ ತಿಳಿಸಿದ್ದ. ಆದರೆ, ಅತಿಯಾಗಿ ಮದ್ಯ ಸೇವಿಸಿದ ಉಮೇಶ್‌ ಮನೆಗೆ ನಡೆದು ಹೋಗುತ್ತಿದ್ದ ವೇಳೆ ಆಯಾ ತಪ್ಪಿ ಸಿಮೆಂಟ್‌ ಇಟ್ಟಿಗೆ ಮೇಲೆ ಬಿದ್ದಿದ್ದಾನೆ. ಈ ವೇಳೆ ಮುಖ ಮತ್ತು ಬಾಯಿಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

Advertisement

ಗುರುವಾರ ಮುಂಜಾನೆ ದಾರಿಹೋಕರು ಮೃತದೇಹ ನೋಡಿ ಪೊಲೀಸರಿಗೆ ಕೊಲೆಯಾಗಿದೆ ಎಂದು ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಕೊಲೆಯಲ್ಲ, ಯುವಕನೇ ಸಿಮೆಂಟ್‌ ಇಟ್ಟಿಗೆ ಮೇಲೆ ಬಿದ್ದು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next