Advertisement

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

08:43 PM Mar 28, 2024 | Suhan S |

ಮಂಡ್ಯ: ಮಂಡ್ಯಕ್ಕೆ ಕುಮಾರಸ್ವಾಮಿ ಅದ್ಭುತವಾದ ಅಭ್ಯರ್ಥಿ. ಮಂಡ್ಯದ ಋಣ ತೀರಿಸಲು ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು.

Advertisement

ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು ವಿರೋಧಿಸುತ್ತಿದ್ದ ಕೆ.ಸಿ.ನಾರಾಯಣ ಗೌಡ ಅವರು ಸಮನ್ವಯ ಸಮಿತಿ ಸಭೆಯ ಭಾಷಣ ಮಾಡಲು ಮುಂದಾದಾಗ ಆರಂಭದಲ್ಲಿಯೇ ಜೆಡಿಎಸ್‌ ಪರ ಘೋಷಣೆ ಕೂಗುವ ಮೂಲಕ ಅಚ್ಚರಿ ಮೂಡಿಸಿದರು.

ಬಳಿಕ ಮಾತನಾಡಿದ ಅವರು, ನಾನು ಎಲ್ಲೋ ಒಂದು ಕಡೆ ನೋವಿನಲ್ಲಿದ್ದೆ ಎಂಬುದು ಸತ್ಯ. ಮಂಡ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಸಂಕಲ್ಪ ಮಾಡಿದ್ದೆ. ಜೆಡಿಎಸ್‌ನವರೇ ಮುಂದೆ ಬಂದು ನಮ್ಮ ಜತೆ ಕೈ ಜೋಡಿಸಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಲು ಹಾಗೂ ಮೋದಿಯವರನ್ನು  ಪ್ರಧಾನಿ ಮಾಡಲು ಬಂದಿದ್ದಾರೆಂದ ಅವರು, ಕುಮಾರಸ್ವಾಮಿಯವರೇ ನೀವು ಬರಲೇಬೇಡಿ. ನೀವು ಗೆದ್ದೇ ಗೆಲ್ಲುತ್ತೀರಿ. ನಿಮ್ಮನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next