Advertisement

LS polls: ಟೂರಿಂಗ್‌ ಟಾಕೀಸ್‌ರೀತಿ  ಕ್ಷೇತ್ರ ಬದಲಿಸುವ ಎಚ್‌ಡಿಕೆ: ಡಿಕೆಶಿ

11:50 PM Apr 04, 2024 | Team Udayavani |

ಕೋಲಾರ: ಮಾಜಿ ಸಿಎಂ ಕುಮಾರಸ್ವಾಮಿ ಅವಕಾಶವಾದಿ. ಜೆಡಿಎಸ್‌ನ ತೆನೆ ಬಿಸಾಕಿ ರಾಮನಗರದಲ್ಲಿ ತಮ್ಮ ಬಾಮೈದ ಡಾ| ಮಂಜುನಾಥ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸಿದ್ದಾರೆ. ಟೂರಿಂಗ್‌ ಟಾಕೀಸ್‌ನಂತೆ ಕ್ಷೇತ್ರ ಬದಲಿಸುತ್ತಾ, ಈಗ ಮಂಡ್ಯದಲ್ಲಿ ನಿಲ್ಲುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದರು.

Advertisement

ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ನಾಮಪತ್ರ ಸಲ್ಲಿಕೆ ಮುನ್ನ ನಗರದಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ಒಂದು ಸ್ವಕ್ಷೇತ್ರ ಎಂಬುದಿಲ್ಲ.  ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲಾಗದೆ ಕ್ಷೇತ್ರಗಳನ್ನು ಬದಲಾಯಿಸು ತ್ತಿರುತ್ತಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next