Advertisement

ಎಚ್ಡಿಕೆ ರಾಜೀನಾಮೆ ನೀಡಿ ಖರ್ಗೆಯನ್ನೇ ಸಿಎಂ ಮಾಡಲಿ

11:21 PM May 15, 2019 | Team Udayavani |

ಕಲಬುರಗಿ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆಯವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಬೇಕಿತ್ತು ಎನ್ನುವ ಬದಲು ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಖರ್ಗೆ ಅವರನ್ನು ತಕ್ಷಣವೇ ಸಿಎಂ ಮಾಡಲಿ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾಳೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿ, ತಮ್ಮ ಕನಸನ್ನು ನನಸು ಮಾಡಿಕೊಳ್ಳಲಿ. ಬರೀ ಬಾಯಿ ಮಾತಲ್ಲಿ ಹೇಳಿದರೆ ಆಗಲ್ಲ. ಮುಖ್ಯಮಂತ್ರಿಯಾಗಿ ವರ್ಷವಾಗುತ್ತಿದ್ದರೂ ಚಿಂಚೋಳಿ ಕಡೆ ಕಣ್ಣೆತ್ತಿಯೂ ನೋಡದ ಕುಮಾರಸ್ವಾಮಿ,

ಈಗ ಚುನಾವಣಾ ಪ್ರಚಾರಕ್ಕೆ ಬಂದು, ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದಾರೆ. ಇದು ಚುನಾವಣಾ ಗಿಮಿಕ್‌. ಚುನಾವಣೆ ಇದೆ ಎಂದು ಏನೇನೋ ಭರವಸೆ ಕೊಟ್ಟು ಹೋಗುವುದಲ್ಲ. ದತ್ತು ಪಡೆಯುವುದಾದರೆ ಇಷ್ಟು ದಿನ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಎಂಬುದಾಗಿ ಸಿಎಂ ಕುಮಾರಸ್ವಾಮಿ ಹೇಳಿರುವುದು ಖರ್ಗೆ ಹಾಗೂ ಸಿದ್ದರಾಮಯ್ಯ ನಡುವೆ ಜಗಳ ಹಚ್ಚುವ ಕುತಂತ್ರವಾಗಿದೆ. ಇಬ್ಬರ ನಡುವೆ ಜಗಳ ಹಚ್ಚಿ ತಾವು ಅಧಿಕಾರ ಪೂರ್ಣಗೊಳಿಸಬೇಕೆನ್ನುವ ಕುತಂತ್ರ ಅವರದ್ದಾಗಿದೆ.
-ಬಸನಗೌಡ ಪಾಟೀಲ ಯತ್ನಾಳ, ಶಾಸಕ.

Advertisement

Udayavani is now on Telegram. Click here to join our channel and stay updated with the latest news.

Next