Advertisement

Hasana: ಪಕ್ಕದಲ್ಲೇ ಕುಳಿತು ಹಳ್ಳ ತೋಡಿದ್ದೂ ನನಗೆ ನೆನಪಿದೆ: ಡಿಕೆಶಿಗೆ ಎಚ್‌ಡಿಕೆ ತಿರುಗೇಟು

09:46 PM Apr 11, 2024 | Team Udayavani |

ಹಾಸನ: ಜೆಡಿಎಸ್‌ ಎಲ್ಲಿದೆ ಎಂದು ಕೆಲವರು ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್‌ ಸಹವಾಸ ಮಾಡಿದ್ದಕ್ಕೆ ಜೆಡಿಎಸ್‌ ಈ ಹಂತಕ್ಕೆ ಬಂದಿದೆ. 5 ವರ್ಷ ಅಧಿಕಾರ ಮಾಡಿ ಎಂದು ಬೆಂಬಲ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟಿದ್ದರು. ಆದರೆ ನಾವು ಎಚ್ಚೆತ್ತುಕೊಂಡು ಜೆಡಿಎಸ್‌ಗೆ ಮರುಜೀವ ಕೊಡಲು ಪ್ರಯತ್ನ ಮಾಡಿದ್ದೇವೆ. ನನ್ನ ಪಕ್ಕದಲ್ಲೇ ಕುಳಿತು ಹಳ್ಳ ತೋಡಿದ್ದೂ ನನಗೆ ನೆನಪಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿದರು.

Advertisement

“ಎಚ್‌ಡಿಕೆ ಸರ್ಕಾರ ತೆಗೆದವರು ಯಾರು ಎಂಬ ಬಗ್ಗೆ ಹಾಸನಾಂಬೆ ಸನ್ನಿಧಿಗೆ ಬಂದು ಪ್ರಮಾಣ ಮಾಡಿ’ ಎಂಬ ಡಿ.ಕೆ.ಶಿವಕುಮಾರ್‌ ಸವಾಲಿಗೆ ಪ್ರತಿಕ್ರಿಯಿಸಿ, ಆಣೆ, ಪ್ರಮಾಣ ಯಾಕೆ ಮಾಡಬೇಕು? ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ತೆಗೆಯಲು ಮದ್ದು ಅರೆದಿದ್ದನ್ನು ಮಾಧ್ಯಮಗಳೇ ಬಿತ್ತರಿಸಿದ್ದವು. ಇನ್ನು ಹಾಸನಾಂಬೆ ಮುಂದೆ ಪ್ರಮಾಣ ಏಕೆ ಮಾಡಬೇಕು ? ಧರ್ಮಸ್ಥಳದ ಆಸ್ಪತ್ರೆಯಲ್ಲಿ ಕುಳಿತು ಈ ಸರ್ಕಾರ ಒಂದೇ ವರ್ಷ ಇರೋದು ಎಂದು ಹೇಳಿದ್ದಲ್ಲ ಎಂದು ಸಿದ್ದರಾಮಯ್ಯ ಅವರ ಫೋನ್‌ ಸಂಭಾಷಣೆಯನ್ನು ನೆನಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next