Advertisement

ನ.1ರಿಂದ ಎಚ್‌ಡಿಕೆ ರಾಜ್ಯ ಪ್ರವಾಸ ಶುರು

06:25 AM Oct 02, 2017 | Team Udayavani |

ಬೆಂಗಳೂರು: ಅತ್ತ ಬಿಜೆಪಿ ನವೆಂಬರ್‌ 2ರಿಂದ ರಾಜ್ಯದಲ್ಲಿ ನವ ಕರ್ನಾಟಕ ಯಾತ್ರೆಗೆ ಹೊರಟಿದ್ದರೆ, ಈಗಷ್ಟೇ ಚೇತರಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನವೆಂಬರ್‌ ಒಂದರಿಂದ ರಾಜ್ಯ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ನಗರದ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತೃಚಿಕಿತ್ಸೆಗೆ ಒಳಪಟ್ಟ ನಂತರ ಇದೇ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಸ್ವಾಮಿ, ಉತ್ತರ ಕರ್ನಾಟಕದ 50 ವಿಧಾನಸಭಾ ಕ್ಷೇತ್ರವನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರವಾಸ ರೂಪಿಸುವುದಾಗಿ ಹೇಳಿದರು.

Advertisement

“”ಉತ್ತರ ಕರ್ನಾಟಕದಲ್ಲಿ ಮನೆ ಮಾಡಿದ್ದರೂ, ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ” ಎಂದರಲ್ಲದೆ, ನ.1ರ ತನಕ ಯಾರೂ ನನ್ನನ್ನು ನೋಡಲು ಬರುವುದು ಬೇಡ, ನಾನೇ ನಿಮ್ಮ ಬಳಿಗೆ ಬರುತ್ತೇನೆ,” ಎಂದರು. ಸಿಎಂ ವಿರುದಟಛಿ ಹರಿಹಾಯ್ದ ಎಚ್‌ಡಿಕೆ: ಮುಂದಿನ ದಸರಾಕ್ಕೆ ಯಾರು ಚಾಲನೆ ನೀಡುತ್ತಾರೆ ಎಂಬುದನ್ನು ತಾಯಿ ಚಾಮುಂಡೇಶ್ವರಿ ನಿರ್ಧರಿಸುತ್ತಾಳೆ. ನಾನೇ ಮುಂದಿನ ಸಿಎಂ ಎಂಬ ಭ್ರಮೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಬರಬೇಕು. ಹಣ ಹಂಚಿ, ಜಾತಿ ಜಾತಿಗಳನ್ನು ಎತ್ತಿಕಟ್ಟಿ ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದುಕೊಂಡಿದ್ದರೆ, ಅದು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ವಿರುದಟಛಿ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next