Advertisement

ಎಚ್‌ಡಿಕೆ-ಸಿದ್ದು ಮಾತು ಅನಗತ್ಯ: ಬಾಲಕೃಷ್ಣ

10:36 PM Sep 25, 2019 | Lakshmi GovindaRaju |

ಬೆಂಗಳೂರು: ಕುಮಾರಸ್ವಾಮಿ ಅವರು ಅಧಿಕಾರ ಸಿಕ್ಕಾಗ ಸರಿಯಾಗಿ ಬಳಕೆ ಮಾಡಿಕೊಳ್ಳದೆ ಈಗ ಮಾತನಾಡುತ್ತಿ ರುವುದು ಸರಿಯಲ್ಲ ಎಂದು ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ದೂರಿದರು. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇದೀಗ ಕಾಂಗ್ರೆಸ್‌ ಜೆಡಿಎಸ್‌ ನಡುವೆ ಡೈವೋರ್ಸ್‌ ಆಗಿದೆ. ಹಾಗೆ ನೋಡಿದರೆ ಕಾಂಗ್ರೆಸ್‌ ಶಾಸಕರು ಮಾತ್ರವಲ್ಲ, ಜೆಡಿಎಸ್‌ ಶಾಸಕರೂ ರಾಜೀನಾಮೆ ಕೊಟ್ಟರಲ್ಲ. ಅವರೂ ಸಿದ್ದರಾಮಯ್ಯ ಮಾತು ಕೇಳಿ ಕೊಟ್ಟರಾ? ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ- ಸಿದ್ದರಾಮಯ್ಯ ಅವರ ನಡುವೆ ಹದ್ದು-ಗಿಣಿ ಮಾತುಗಳು ಅನಗತ್ಯ.

Advertisement

ಹೈಕಮಾಂಡ್‌ ಮಾತಿಗೆ ಕಟ್ಟುಬಿದ್ದು ವೈಯಕ್ತಿಕವಾಗಿ ವಿರೋಧ ಇದ್ದರೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು ಎಂದು ಹೇಳಿದರು. “ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಿಂದ ಉಪ ಚುನಾವಣೆ ಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ ಹೈಕಮಾಂ ಡ್‌ನಿಂದ ಒತ್ತಡವಿದೆ. ಆದರೆ, ನಾನು ಸಿದ್ಧವಿಲ್ಲ. ನಾನು ಮಾಗಡಿ ಯವನು, ಅಲ್ಲೇ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಊರು ಬಿಟ್ಟು ಬಂದ ಗೌಡನ ಕಥೆಯಾಗುತ್ತದೆ. ನಾನು ಮಾಗಡಿ ಗೌಡನಾಗಿಯೇ ಇರುತ್ತೇನೆ’ ಎಂದು ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next