Advertisement

CMಗೆ ಅಧಿಕಾರ ಕೊಟ್ಟಿರೋದು ಗ್ರಾಮವಾಸ್ತವ್ಯಕ್ಕಲ್ಲ, ಶೋಭಾ; ಶ್ರೀರಾಮುಲು ಬಹುಪರಾಕ್!

08:40 AM Jun 04, 2019 | Nagendra Trasi |

ಉಡುಪಿ:ಜನ ಅಧಿಕಾರ ಕೊಟ್ಟಿರೋದು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಲಿಕ್ಕೆ. ಗ್ರಾಮ ವಾಸ್ತವ್ಯ, ಶಾಲೆಗಳಲ್ಲಿ ವಾಸ್ತವ್ಯ ಹೂಡಲಿಕ್ಕೆ ಅಲ್ಲ. ಕಳೆದ ಬಾರಿ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಏನಾಗಿದೆ ಅಂತ ಗೊತ್ತು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

Advertisement

ಐಶಾರಾಮಿ ಹೋಟೆಲ್ ನಲ್ಲಿ ಕುಳಿತು ಕಮಿಷನ್ ವ್ಯವಹಾರ ಮಾಡುತ್ತಿದ್ದ ಕುಮಾರಸ್ವಾಮಿ ಈಗ ಗ್ರಾಮವಾಸ್ತವ್ಯದ ನಾಟಕವಾಡುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಆರೋಪಿಸಿದರು.

ಉಡುಪಿ ಜಿಲ್ಲೆಯ ಶಾಸಕರ ಕೈ ಕಟ್ಟಿ ಹಾಕಲು ಮೈತ್ರಿ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಕರಂದ್ಲಾಜೆ ಈ ಸಂದರ್ಭದಲ್ಲಿ ದೂರಿದರು.

ಇಷ್ಟು ದಿನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕಾಲಹರಣ: ಬಿಎಸ್ ವೈ

ಇಷ್ಟು ದಿನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸಿಎಂ ಕಾಲಹರಣ ಮಾಡಿದ್ದು, ಇದೀಗ ಗ್ರಾಮವಾಸ್ತವ್ಯದ ನೆನಪಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಫೈವ್ ಸ್ಟಾರ್ ಹೋಟೆಲ್ ನಲ್ಲಿದ್ದ ಸಿಎಂ ಈಗ ಹೊಸ ನಾಟಕ ಆರಂಭಿಸಿದ್ದಾರೆ ಎಂದು ದೂರಿದರು.

Advertisement

ಸಿಎಂ ನಿರ್ಧಾರ ಸರಿ: ಶ್ರೀರಾಮುಲು ಬಹುಪರಾಕ್

ಗ್ರಾಮವಾಸ್ತವ್ಯದ ನಿರ್ಧಾರ ಸರಿಯಾಗಿದೆ. ಕುಮಾರಸ್ವಾಮಿಯವರು ಈ ಹಿಂದೆಯೇ ಗ್ರಾಮವಾಸ್ತವ್ಯ ಮಾಡಿದ್ದರು. ಪಾಪ ಅವರ ಆರೋಗ್ಯವೂ ಸರಿ ಇಲ್ಲ. ಇನ್ನಾದರು ಗ್ರಾಮವಾಸ್ತವ್ಯದ ಮೂಲಕ ಬಡವರ, ರೈತರ ನಿಜವಾದ ಕಷ್ಟ ತಿಳಿದುಕೊಳ್ಳಲಿ. ಜನರ ಮಧ್ಯದಲ್ಲಿ ಇದ್ದು ಜನಸ್ಪಂದನೆಯ ಕೆಲಸ ಮಾಡಲಿ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next