Advertisement

ಐಎಂಎ ಹಗರಣಕ್ಕೂ ನನಗೂ ಏನೂ ಸಂಬಂಧವಿಲ್ಲ : HDK ಸ್ಪಷ್ಟನೆ

09:14 PM Feb 21, 2021 | Team Udayavani |

ರಾಮನಗರ: ಐಎಂಎ ಹಗರಣಕ್ಕೂ ನನಗೂ ಏನೂ ಸಂಬಂಧವಿಲ್ಲ. ನನ್ನ ಅವಧಿಯಲ್ಲೇ ತನಿಖೆಗೆ ಆದೇಶಿಸಿ, ಕಠಿಣ ಕ್ರಮ ತೆಗೆದುಕೊಳ್ಳಲು ಹೇಳಿದ ಮೇಲೆ ನನ್ನ ಪಾತ್ರವೇನಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಐಎಂಎ (ಐ ಮಾನಿಟರಿ ಅಡೈಸರಿ) ಮಾಲೀಕ ಮನ್ಸೂರ್‌ ಅಲಿಖಾನ್‌ ಕೊಟ್ಟಿರುವ ಹೇಳಿಕೆಯೊಂದರಲ್ಲಿ ರೋಷನ್‌ ಬೇಗ್‌ ಮೂಲಕ ಕುಮಾರಸ್ವಾಮಿಗೆ ಐದು ಕೋಟಿ ರೂ. ಸಲ್ಲಿಕೆಯಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮವೊಂದರಲ್ಲಿ ಸುದ್ದಿ ನೋಡಿದೆ. ಕುಮಾರಸ್ವಾಮಿ ಹೆಸರಿನಲ್ಲಿ ಕಲೆಕ್ಷನ್‌ ಆಗಿದೆ. ಆದರೆ, ಆ ಹಣ ಅವರಿಗೆ ತಲುಪಿಲ್ಲ ಎಂದು ಹೇಳಲಾಗಿದೆ. ನನಗೂ, ಅದಕ್ಕೂ ಸಂಬಂಧ ಏನು? ಅದ್ಯಾರು ಕೊಟ್ಟರು, ಅದ್ಯಾರು ತೆಗೆದುಕೊಂಡರು? ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ನಾನು ಜನಸಾಮಾನ್ಯರಿಗೆ ದ್ರೋಹ ಮಾಡುವ ಅಥವಾ ಜನರ ಹಣ ಲೂಟಿ ಮಾಡುವವರಿಗೆ ರಕ್ಷಣೆ ಕೊಟ್ಟವನಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ದೀಪಿಕಾ, ಅಕ್ಷಯ್‌ಗೆ ಒಲಿದ ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next