Advertisement

Mandya; ಸಿಎಂ, ಡಿಸಿಎಂ ಬೈಯ್ಯಲು ಎಚ್‌ಡಿಕೆ ಸಂಸದ ಸ್ಥಾನ ದುರ್ಬಳಕೆ: ಚಲುವರಾಯಸ್ವಾಮಿ

09:47 PM Aug 13, 2024 | Team Udayavani |

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಬೈಯ್ಯಲು  ಎಚ್‌.ಡಿ.ಕುಮಾರಸ್ವಾಮಿ ಅವರು ಸಂಸತ್‌ ಸದಸ್ಯ ಸ್ಥಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಕಿಡಿಕಾರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಬೆಳಗ್ಗೆ ಎದ್ದರೆ ಸರ್ಕಾರ ತೆಗೆಯುತ್ತೇವೆ ಎನ್ನುತ್ತಾರೆ. ಇದೇನೂ ಮಕ್ಕಳ ಆಟನಾ?. ಡಿ.ಕೆ.ಶಿವಕುಮಾರ್‌ ಅವರನ್ನು ಏನೆಂದು ತಿಳಿದುಕೊಂಡಿದ್ದಾರೆ? ಅವರನ್ನು ಬಯ್ಯೋದೆ ಕೆಲಸ ಅಂದುಕೊಂಡಿದ್ದಾರಾ ಎಂದು ವಾಗ್ಧಾಳಿ ನಡೆಸಿದರು. ಮಂಡ್ಯದಲ್ಲಿ ನಿಖೀಲ್‌ ಪರ ಕ್ಯಾಂಪೇನ್‌ಗೆ ಬಂದಾಗ ಜೋಡೆತ್ತು ಎಂದರು.

ಪ್ರಜ್ವಲ್‌ ಪೆನ್‌ಡ್ರೆçವ್‌ ಬಿಡುಗಡೆಗೆ ಪ್ರೀತಂಗೌಡ ಕಾರಣ ಅಂತೀರಾ, ಮತ್ತೂಂದೆಡೆ ಮಹಾನಾಯಕ ಸಿಡಿ ಬಿಡುಗಡೆ ಮಾಡಿದರು ಅಂತೀರಾ. ಬೇರೆಯವರನ್ನು ಬೈಯ್ಯೋಕೆ, ಟೀಕೆ ಮಾಡಲು ಅ ಧಿಕಾರ ಬಳಸಿಕೊಳ್ಳುತ್ತಿದ್ದೀರಾ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next