Advertisement
ಕೋವಿಡ್ ಎರಡನೇ ಅಲೆ ತೀವ್ರ ವಾಗಿದ್ದು, ಸೋಂಕಿತರಲ್ಲಿ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಅತ್ಯಾವಶ್ಯಕವಾಗಿದೆ. ಅಲ್ಲದೆ ಸೋಂಕಿ ತರಲ್ಲಿ ಹಲವರಿಗೆ ವೈದ್ಯಕೀಯ ಆಮ್ಲಜನಕಯುಕ್ತ ಹಾಸಿಗೆಗಳು ಹಾಗೂ ವೆಂಟಿಲೇಟರ್ ಅಗತ್ಯವಿದೆ. ಸದ್ಯ ಅವುಗಳ ಕೊರತೆಯಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
Related Articles
Advertisement
ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಇಂದು ನಾವೆಲ್ಲರೂ ನಮ್ಮ ಜೀವಮಾನದ ಅತ್ಯಂತ ದುರದೃಷ್ಟಕರ ಹಾಗೂ ಸಂಕಷ್ಟಮಯ ಘಟ್ಟದಲ್ಲಿದ್ದೇವೆ. ರಾಜ್ಯದಲ್ಲಿ ಎರಡನೇ ಅಲೆ ಮರಣಾಂತಿಕ ರೂಪ ಪಡೆಯುತ್ತಿದೆ.
ನನ್ನ ಹತ್ತಿರದ ಸಂಬಂಧಿಗೆ ಸೋಂಕು ತಗಲಿದ್ದು, ಬುಧವಾರ ಅವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಒದಗಿಸಲು ಆರೋಗ್ಯ ಸಚಿವರಾದ ಡಾ| ಕೆ.ಸುಧಾಕರ್, ಬಿಬಿಎಂಪಿ ಆಯು ಕ್ತರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿ ಸಿದೆ. ಆದರೆ ಎಲ್ಲಿಯೂ ಒಂದೂ ಹಾಸಿಗೆ ಸಿಗಲಿಲ್ಲ. ಸೋಂಕಿತ ವ್ಯಕ್ತಿ ಮಧ್ಯಾಹ್ನ 2ರಿಂದ ತಡರಾತಿ 11 ಗಂಟೆ ವರೆಗೆ ಆ್ಯಂಬುಲೆನ್ಸ್ ನಲ್ಲೇ ಇರಬೇಕಾಯಿತು. ಒಬ್ಬ ಜನಪ್ರತಿನಿಧಿಯಾಗಿ, ನನ್ನ ವಿಷಯ ದಲ್ಲೇ ಇಂತಹ ಅನುಭವವಾದರೆ ಇನ್ನು ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.
ಯು.ಬಿ.ವೆಂಕಟೇಶ್ ಪತ್ರ :
ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಕೂಡ ಪತ್ರ ಬರೆದಿದ್ದು, ಬೆಂಗಳೂರಿನಲ್ಲಿ ಕೊರೊನಾ ಹೆಚ್ಚುತ್ತಿದ್ದರೂ ಸರಕಾರ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ನೋವುಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖೇದನೀಯ ಎಂದು ಹೇಳಿದ್ದಾರೆ.