Advertisement

ಸುಪ್ರೀಂಕೋರ್ಟ್‌ ತೀರ್ಪಿಗೆ ಎಚ್‌.ಡಿ.ದೇವೇಗೌಡರ ಅತೃಪ್ತಿ

06:50 AM Feb 21, 2018 | Team Udayavani |

ಹಾಸನ: ಕಾವೇರಿ ಜಲ ವಿವಾದ ಸಂಬಂಧ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. 

Advertisement

ಚನ್ನರಾಯಪಟ್ಟಣ ತಾಲೂಕು ಎ.ಕಾಳೇನಹಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕರ್ನಾಟಕಕ್ಕೆ  ಕಾವೇರಿ ನ್ಯಾಯಾಧಿಕರಣ ಹಂಚಿಕೆ ಮಾಡಿದ್ದಕ್ಕಿಂತ ಸುಮಾರು 15 ಟಿಎಂಸಿ ಅಡಿ ಹೆಚ್ಚುವರಿಯಾಗಿ ಹಂಚಿಕೆ ಮಾಡಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ ಎಂದರು.

ಅದರಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗೆ ಸುಮಾರು 5 ಟಿಎಂಸಿ ಅಡಿ ಹಂಚಿಕೆ ಮಾಡಿದೆ. ಅಂದರೆ ಕರ್ನಾಟಕ ಪ್ರತಿ ವರ್ಷ ತಮಿಳುನಾಡಿಗೆ 192 ಟಿಎಂಸಿ ಅಡಿ ಬಿಡಬೇಕೆಂದು ನೀಡಿದ್ದ ನೀರಿನಲ್ಲಿ ಕೇವಲ 14.75 ಟಿಎಂಸಿ ಅಡಿ ಕಡಿಮೆ ಮಾಡಿದೆ. ಅದರಲ್ಲಿಯೇ ಬೆಂಗಳೂರು ಮಹಾ ನಗರಕ್ಕೆ ಕುಡಿಯುವ ನೀರಿಗಾಗಿ 4.25 ಟಿಎಂಸಿ ನಿಗದಿಪಡಿಸಿದೆ. 

ಅಂದರೆ ತಮಿಳುನಾಡಿಗೆ ಈ ಹಿಂದೆ ಬಿಡಬೇಕಾಗಿದ್ದ 192 ಟಿಎಂಸಿ ಅಡಿ ನೀರಿನಲ್ಲಿ ಕೇವಲ 14.75 ಟಿಎಂಸಿ ಅಡಿ ಕಡಿಮೆಯಾಗಿದೆ ಅಷ್ಟೇ. ನ್ಯಾಯಾಧೀಕರಣವು ಕರ್ನಾಟಕದಿಂದ  ತಮಿಳುನಾಡಿಗೆ ಬಿಡಬೇಕೆಂದು 2007ರಲ್ಲಿ  ನೀಡಿದ್ದ ತೀರ್ಪಿನಲ್ಲಿ ನಿಗದಿಪಡಿಸಿದ್ದ  192 ಟಿಎಂಸಿ ಅಡಿಗಳಲ್ಲಿ 40 ಟಿಎಂಸಿಗೂ ಅಧಿಕ ನೀರು  ಕಡಿತ ಮಾಡಬೇಕಾಗಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next