Advertisement

ಪ್ರಜ್ವಲ್‌ ರಾಜೀನಾಮೆ ಸಲ್ಲಿಸದಂತೆ ಹೈಕೋರ್ಟ್‌ ಮೊರೆ

11:44 PM Aug 19, 2019 | Lakshmi GovindaRaj |

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರ ಆಯ್ಕೆ ಕುರಿತ ತಕರಾರು ಅರ್ಜಿ ಇತ್ಯರ್ಥವಾಗುವ ತನಕ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಂತೆ ಆದೇಶ ನೀಡಬೇಕೆಂದು ಪರಾಜಿತ ಅಭ್ಯರ್ಥಿ ಎ. ಮಂಜು ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್‌ ಆಯ್ಕೆಯನ್ನು ಅಸಿಂಧು ಎಂದು ಘೋಷಿಸುವಂತೆ ಕೋರಿ 2019ರ ಜೂನ್‌ 26ರಂದು ತಕರಾರು ಸಲ್ಲಿಸಿದ್ದೇನೆ.

Advertisement

ಅರ್ಜಿಯ ಗಂಭೀರತೆ ಅರಿತು ಪ್ರಜ್ವಲ್‌ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಜ್ವಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನನ್ನ ಮೂಲ ಅರ್ಜಿ ಅನೂರ್ಜಿತಗೊಳ್ಳಲಿದೆ ಎಂದು ಎ. ಮಂಜು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ. ಅಷ್ಟೇ ಅಲ್ಲದೆ ಮೂಲ ಅರ್ಜಿಯ ವ್ಯಾಜ್ಯದಲ್ಲಿ ಪ್ರಜ್ವಲ್‌ ರೇವಣ್ಣ ಸೋತರೆ ನನ್ನನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕಾಗುತ್ತದೆ.

ಹೀಗಾಗಿ ಮಧ್ಯಂತರ ಅರ್ಜಿಯನ್ನು ವಿಚಾರಣೆ ನಡೆಸಬೇಕು, ರಾಜೀ ನಾಮೆ ನೀಡದಂತೆ ಆದೇಶಿಸಬೇಕು ಎಂದು ಎ.ಮಂಜು ಅರ್ಜಿಯಲ್ಲಿ ಕೋರಿದ್ದಾರೆ. ಈ ಅರ್ಜಿ ವಿಚಾರಣೆ ಸೋಮವಾರ ನ್ಯಾ. ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬಂದಿತ್ತು. ಈ ಹಿಂದೆ ನ್ಯಾಯಾ ಲಯ ಪ್ರತಿವಾದಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರಿಗೆ ಜಾರಿಗೊಳಿಸಿದ್ದ ಸಮನ್ಸ್‌ ಸ್ವೀಕಾರ ಗೊಂಡಿಲ್ಲ. ಜತೆಗೆ, ಇತರೆ ಪ್ರತಿವಾದಿಗಳು ಲಿಖೀತ ಆಕ್ಷೇಪಣೆ ಸಲ್ಲಿಸದ ಕಾರಣದಿಂದ ನ್ಯಾಯಪೀಠ ವಿಚಾರಣೆ ಸೆ.3ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next