Advertisement

ಬಕ್ರೀದ್‌ ವೇಳೆ ಗೋರಕ್ಷಕರ ಮೇಲೆ ಕಣ್ಗಾವಲಿಗೆ ಸೂಚನೆ

09:25 AM Aug 22, 2017 | Team Udayavani |

ಮುಂಬಯಿ: ಮುಂದಿನ ತಿಂಗಳು ಬಕ್ರೀದ್‌ ಹಬ್ಬ ನಡೆಯಲಿರುವ ಹಿನ್ನೆಲೆಯಲ್ಲಿ ಗೋರಕ್ಷಕರ ಮೇಲೆ ಕಣ್ಣಿಡುವಂತೆ ಪೊಲೀಸರಿಗೆ ಬಾಂಬೆ ಹೈಕೋರ್ಟ್‌ ಸೂಚಿಸಿದೆ. ಆದರೆ ಈ ಬಗ್ಗೆ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ. ಕಾನೂನು ಪಾಲನೆ ಪೊಲೀಸರ ಜವಾಬ್ದಾರಿಯಾಗಿರುತ್ತದೆ ಎಂದು ಕೋರ್ಟ್‌ ಹೇಳಿದೆ. ಬಕ್ರೀದ್‌ ವೇಳೆ ಗೋರಕ್ಷಕರು ಸಮಸ್ಯೆ ತಂದೊಡ್ಡಬಹುದು ಎಂದು ಶದಾಬ್‌ ಪಟೇಲ್‌ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠ, ಕಾನೂನು, ಸುವ್ಯವಸ್ಥೆ  ಪಾಲಿಸಬೇಕು ಎಂದು ಪೊಲೀಸರಿಗೆ ಸೂಚಿಸಿತು. ಬಕ್ರೀದ್‌ ವೇಳೆ ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ಸಾಧ್ಯತೆ ಇದೆ, ಜನರ ರಕ್ಷಿಸಲು ಹೆಲ್ಪ್ ಲೈನ್ ಆರಂಭಿಸಲು ಸರಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೇಳಿಕೊಳ್ಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next